ಗಾಂಧಿನಗರ ಶಾಲೆಗೆ ಎಂ.ಎಲ್.ಸಿ ಬೋಜೆ ಗೌಡ ಭೇಟಿ

0

ಗಾಂಧಿನಗರ ಕೆ ಪಿ ಎಸ್ ಗೆ ಜನವರಿ 12 ರಂದು ಎಂ.ಎಲ್.ಸಿ ಬೋಜೆ ಗೌಡ ಭೇಟಿ ನೀಡಿ ಶಾಲಾ ಪರಿಸರ ಮತ್ತು ನೂತನವಾಗಿ ನಿರ್ಮಿಸಿದ ರಂಗಮಂದಿರದ ವೀಕ್ಷಣೆ ನಡೆಸಿದರು.

ಶಾಲೆಯ ರಂಗ ಮಂದಿರಕ್ಕೆ 2.ಲಕ್ಷ ರೂ ಅನುದಾನವನ್ನು ಈ ಮೊದಲು ಅವರು ನೀಡಿದ್ದು,ಮುಂದಿನ ದಿನಗಳಲ್ಲಿ ಕಾಲೇಜಿನ ಹೊರಾಂಗಣಕ್ಕೆ ಇಂಟರ್ಲಾಕ್ ಅಳವಡಿಸಲು 2 ಲಕ್ಷ ರೂಪಾಯಿಗಳ ಅನುದಾನವನ್ನು ನೀಡುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿರುತ್ತಾರೆ ಎಂದು ತಿಳಿದು ಬಂದಿದೆ.

ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ,ಸಂತೋಷ್, ಪ್ರಾಂಶುಪಾಲರಾದ ಅಬ್ದುಲ್ ಸಮದ್ , SDMC ಕಾರ್ಯಧ್ಯಕ್ಷ ಚಿದಾನಂದ ಕುದ್ಪಾಜೆ, ಅಧ್ಯಾಪಕವೃಂದದವರು, ವಿದ್ಯಾರ್ಥಿಗಳ ಪೋಷಕರಾದ ಶೈನಿ, ದಮಯಂತಿ,ಯಶ್ವಿನಿ,ಪದ್ಮಿನಿ,ಜ್ಯೋತಿ, ಲಕ್ಷ್ಮೀ,ಇಬ್ರಾಹಿಂ ಮುಂತಾದವರು ಉಪಸ್ಥಿತರಿದ್ದರು.