ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾ ದಿನದಂದು ಮಂಡೆಕೋಲಿನಲ್ಲಿ ಹಿಂ.ಜಾ.ವೇದಿಕೆಯಿಂದ ‌ರೋಗಿಯೊಬ್ಬರಿಗೆ ಸಹಾಯಧನ ಹಸ್ತಾಂತರ

0

ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ನಡೆಯುವ ದಿನವಾದ ಇಂದು ಮಂಡೆಕೋಲಿನ ಹಿಂದೂ ಜಾಗರಣಾ‌ ವೇದಿಕೆಯವರು ದಾನಿಗಳಿಂದ ಸಂಗ್ರಹಿಸಿದ ರೂ.1 ಲಕ್ಷ ದೇಣಿಗೆಯನ್ನು‌ ರೋಗಿಯೊಬ್ಬರಿಗೆ ವಿತರಿಸಿದ್ದಾರೆ.

ಮಂಡೆಕೋಲು ಗ್ರಾಮದ‌ಕನ್ಯಾನದ ಲಕ್ಷ್ಮೀ ಎಂಬವರು ಅಸೌಖ್ಯದಿಂದ ಬಳಲುತಿದ್ದು ಅವರ ಚಿಕಿತ್ಸೆ ಸಹಾಯವಾಗಿ ಹಿಂದೂ‌ ಜಾಗರಣಾ ವೇದಿಕೆ ಧನ ಸಂಗ್ರಹ ಮಾಡಿತ್ತು. ಆ ಹಣವನ್ನು ಇಂದು‌ ಬೆಳಗ್ಗೆ‌ ಹಸ್ತಾಂತರಿಸಲಾಯಿತು.

ನಿವೃತ್ತ ಯೋಧ ಅಡ್ಡಂತಡ್ಕ ದೇರಣ್ಣ ಗೌಡ ರು ದೇಣಿಗೆ‌ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ‌ಜಾಗರಣಾ ವೇದಿಕೆಯ ಮಹೇಶ್ ಉಗ್ರಾಣಿಮನೆ, ಲಕ್ಣ್ಮಣ ಉಗ್ರಾಣಿಮನೆ, ಗ್ರಾ.ಪಂ. ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಸದಸ್ಯ ಬಾಲಚಂದ್ರ ದೇವರಗುಂಡ,ಮಂಡೆಕೋಲು ಘಟಕದ ಅಧ್ಯಕ್ಷ ಹೇಮಂತ್ ಕೊಡೆಂಚಡ್ಕ, ಜಾಗರಣಾ ವೇದಿಕೆ ಕಾರ್ಯಕರ್ತರು, ಮೊದಲಾದವರಿದ್ದರು.