ಹರಿಹರ ಪಲ್ಲತ್ತಡ:ಗುಂಡಿಹಿತ್ಲು ಶ್ರೀ ಅಯ್ಯಪ್ಪ ಸ್ವಾಮಿ ದೇವರ ಹಾಗು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ

0

ಹರಿಹರ ಪಲ್ಲತ್ತಡ್ಕ ಗ್ರಾಮದ ಗುಂಡಿಹಿತ್ಲುಶ್ರೀ ಅಯ್ಯಪ್ಪ ಸ್ವಾಮಿ ದೇವರ ಹಾಗು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಜ.26 ರಂದು ನಡೆಯಿತು
ಬೆಳಿಗ್ಗೆ ಗಣಪತಿ ಹವನ ನಂತರ ನಾಗತಂಬಿಲ, ಮದ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ಹಾಗು ಅನ್ನಪ್ರಸಾದ ವಿತರಿಸಲಾಯಿತು.
ಸಂಜೆ ಪರಿವಾರ ದೈವಗಳ ತಂಬಿಲ ನೆಡಯಿತು.


ಬೆಳಿಗ್ಗೆಯಿಂದ ಸಂಜೆ ತನಕ ಶ್ರೀ ದೇವಿ ಭಜನಾ ಹರಿಹರ ಪಲ್ಲತ್ತಡ್ಕ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಶಕ್ತಿನಗರ ಕಲ್ಮಕಾರು, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಹರಿಹರ ಪಲ್ಲತ್ತಡ್ಕ, ಶ್ರೀ ಮಯೂರ ಭಜನಾ ಮಂಡಳಿ ಕಟ್ಟ ಗೋವಿಂದನಗರ,ಶ್ರೀ ಹರಿಹರೇಶ್ವರ ಭಜನಾ ಮಂಡಳಿ ಕೊಲ್ಲಮೊಗ್ರ ಹರಿಹರ, ಶ್ರೀದೇವಿ ಭಜನಾ ಮಂಡಳಿ ಬಾಳುಗೋಡು, ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ನಡುಗಲ್ಲು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಆಡಳಿತ ಮಂಡಳಿಯ ಅಧ್ಯಕ್ಷ ಕೆ ಜನಾರ್ದನ ಗುಂಡಿಹಿತ್ಲು, ಉಪಾಧ್ಯಕ್ಷ ಶರತ್ ಭಾಗವತ್, ಕೋಶಾಧಿಕಾರಿ ಮಣಿಕಂಠ ಕಟ್ಟ, ಕಾರ್ಯದರ್ಶಿ ಬಿಂದು ಪಿ , ಜೊತೆ ಕಾರ್ಯದರ್ಶಿ ಸತೀಶ್ ಟಿ.ಎನ್, ಸದಸ್ಯರುಗಳಾದ ನಾರಾಯಣಯ್ಯ ಕೇಮಾಟಿ, ನಿತ್ಯಾನಂದ ಭೀಮಗುಳಿ, ರಾಜೀವ ಪೆರ್ಮುಕಜೆ, ನಾರಾಯಣ ಮುಳ್ಳುಬಾಗಿಲು, ಸುಜಿತ್ ಶರ್ಮ ಗುಂಡಿಹಿತ್ಲು, ನಿಶಾಂತ್ ಕಟ್ಟ, ಮಣಿಕಂಠ ಕೊಳಗೆ, ಹರೀಶ್ ಹೆಚ್, ವಿಶ್ವನಾಥ ಮುಂಡೋಡಿ, ಶಶಿಕಲಾ ಹರಿಹರ, ಹುಕ್ರಪ್ಪ ನಾಯ್ಕ, ಮನೀಷ್ ಪಲ್ಲತಡ್ಕ, ರೋಹಿದಾಸ್ ಹರಿಹರ, ನಾರಾಯಣ ಹರಿಹರ ಮತ್ತಿತರರು ಆದಿಯಾಗಿ‌ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.