ಐನೆಕಿದು: ನಿಸರ್ಗ ವೃತ್ತದಲ್ಲಿ ಮಾರ್ಗಸೂಚಿ ಅನಾವರಣ

0

ನಿಸರ್ಗ ಯುವಕ ಮಂಡಲದ ವತಿಯಿಂದ ಐನೆಕಿದು ನಿಸರ್ಗ ವೃತ್ತದಲ್ಲಿ ಅಳವಡಿಸಿರುವ ಮಾರ್ಗಸೂಚಿಯನ್ನು ಶ್ರೀಧರ್ ಅಂಙಣ ಹಾಗೂ ಸುಬ್ರಹ್ಮಣ್ಯ ಗ್ರಾ. ಪಂ. ಸದಸ್ಯರಾದ ಗಿರೀಶ್ ಪೈಲಾಜೆ ಪುಷ್ಪಾರ್ಚನೆ ಮಾಡುವ ಮೂಲಕ ಅನಾವರಣಗೊಳಿಸಿದ್ದರು.

ಈ ಸಂದರ್ಭದಲ್ಲಿ ನಿಸರ್ಗ ಯುವಕ ಮಂಡಲ ಅಧ್ಯಕ್ಷ ಕಾರ್ತಿಕ್ ಕೂಜುಗೋಡು, ಉಪಾಧ್ಯಕ್ಷ ವಿನಯ್ ಅಂಙಣ, ಕಾರ್ಯದರ್ಶಿ ಅನುಜ್ ನೆತ್ತಾರ, ಮಾಜಿ ಅಧ್ಯಕ್ಷರುಗಳಾದ ರಮೇಶ್ ಕೋನಡ್ಕ, ಯಶವಂತ್ ಕೊಪ್ಪಳಗದ್ದೆ, ಅಜಿತ್ ಕಲ್ಲೇರಿ, ಶಶಿಧರ್ ಕತ್ತಿಮಜಲ್, ಲಕ್ಮೀಶ್ ಇಜ್ಜಿನಡ್ಕ ಸದಸ್ಯರುಗಳಾದ ಅಶೋಕ್ ಐಪಿನಡ್ಕ, ಸುಹಾಸ್ ಕೋಟೆಬೈಲ್,ಚಿದಾನಂದ ಕಟ್ರಮನೆ, ಕುಮಾರ್ ದಡ್ಡು, ಉಜ್ವಲ್ ನವಗ್ರಾಮ, ಶಿವಪ್ರಸಾದ್ ಆಚಾರಿಗದ್ದೆ, ಉಮೇಶ್ ಕತ್ತಿಮಜಲ್, ಯಶವಂತ್ ಆಚಾರಿಗದ್ದೆ, ಉಪಸ್ಥಿತರಿದ್ದರು.