ಕೆ.ವಿ.ಜಿ. ಕಾನೂನು ಕಾಲೇಜಿನ ರೆಡ್ ಕ್ರಾಸ್ ಘಟಕ ಸಾಂದೀಪ್ ವಿಶೇಷ ಶಾಲೆಗೆ ಭೇಟಿ

0

ಕೆ.ವಿ.ಜಿ. ಕಾನೂನು ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ ಸುಳ್ಯದ ಎಮ್. ಬಿ. ಫೌಂಡೇಶನ್(ರಿ), ಸಾಂದೀಪ್ ವಿಶೇಷ ಶಾಲೆಗೆ ಫೆ. 23 ರಂದು ಭೇಟಿ ನೀಡಲಾಯಿತು.

ಶಾಲೆಯ ಸ್ಥಾಪಕ ಎಂ. ಬಿ ಸದಾಶಿವರವರು ಮಾತನಾಡುತ್ತಾ ವಿಶೇಷ ಚೇತನ ಮಕ್ಕಳನ್ನು ತರಬೇತುಗೊಳಿಸಿ ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಮುಖ್ಯೋಪಾದ್ಯಾಯಿನಿ ಹರಿಣಿ ಸದಾಶಿವರವರು ವಿಶೇಷ ಚೇತನ ಮಕ್ಕಳ ತರಬೇತಿಯ ವಿವಿಧ ಹಂತಗಳನ್ನು ವಿವರಿಸಿದರು. ಕೆ. ವಿ. ಜಿ. ಕಾನೂನು ಕಾಲೇಜಿನ ಪ್ರಾಂಶುಪಾಲ ಉದಯಕೃಷ್ಣ. ಬಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಟೀನಾ. ಹೆಚ್. ಎಸ್, ರೆಡ್ ಕ್ರಾಸ್ ಘಟಕದ ಸಂಯೋಜಕಿಯರಾದ ಅರ್ಚನಾ.ಕೆ ಮತ್ತು ರಚನಾ.ಕೆ ಮತ್ತು ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳು ಮತ್ತು ಸಾಂದೀಪ್ ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು.

ಶಾಲೆಯ ಮಕ್ಕಳಿಗೆ ಉಪಹಾರ ಮತ್ತು ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಪರಸ್ಪರ ಮನರಂಜನಾ ಕಾರ್ಯಕ್ರಮವು ನಡೆಯಿತು.