ಕೋಲ್ಚಾರಿನಲ್ಲಿ ಸಂಜೀವಿನಿ ಫಟಕದ ಕಟ್ಟಡಕ್ಕೆ ಗುದ್ದಲಿ ಪೂಜೆ

0

18.5 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಲಿದೆ ನೂತನ ಕಟ್ಟಡ

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ
ಕೋಲ್ಚಾರಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಡಿಯಲ್ಲಿ ಸಂಜೀವಿನಿ ಘಟಕದ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆಯು ಮಾ.13 ರಂದು ನೆರವೇರಿತು.

ಆಲೆಟ್ಟಿಪಂಚಾಯತ್ ಅಧ್ಯಕ್ಷೆ ವೀಣಾವಸಂತ ಆಲೆಟ್ಟಿ ಗುದ್ದಲಿ ಪೂಜೆ ನೆರವೇರಿಸಿ”ಉದ್ಯೋಗ ಖಾತರಿಯೋಜನೆಯಡಿಯಲ್ಲಿ 16.5 ಲಕ್ಷ ಅನುದಾನಹಾಗೂಪಂಚಾಯತ್‌ ನಿಂದ ರೂ. 2 ಲಕ್ಷ ಒಟ್ಟು ರೂ.18.5 ಲಕ್ಷ ಅನುದಾನದಲ್ಲಿ ಕಟ್ಟಡದ ಕಾಮಗಾರಿ ನಡೆಯಲಿದೆ‌ ಎಂದು ಅಧ್ಯಕ್ಷರು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಕಮಲ ನಾಗಪಟ್ಟಣ, ಸದಸ್ಯರಾದ ದಿನೇಶ್ ಕಣಕ್ಕೂರು, ಶಂಕರಿ ಕೊಲ್ಲರಮೂಲೆ, ಗೀತಾ ಕೋಲ್ಚಾರು, ಧರ್ಮಪಾಲ ಕೊಯಿಂಗಾಜೆ, ಕುಸುಮ ಬಿಲ್ಲರಮಜಲು, ಮಾಜಿ ಸದಸ್ಯರಾದ ಸೀತಾರಾಮ ಕೊಲ್ಲರಮೂಲೆ ಹಾಗೂ ಸ್ಥಳೀಯರಾದ ಬಾಲಕೃಷ್ಣ ಕಾರ್ತಡ್ಕ, ಸೋಮನಾಥ ಕುಡೆಂಬಿ, ಆಲೆಟ್ಟಿ ಸೊಸೈಟಿ ನಿರ್ದೇಶಕ ಸುದರ್ಶನ್ ಪಾತಿಕಲ್ಲು, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಅರುಣಾಕುಮಾರಿ ಕೋಲ್ಚಾರು, ಸ್ತ್ರೀಶಕ್ತಿ ಸಂಘದ ಅದ್ಯಕ್ಷೆ ಶಾರದ ಕೊಲ್ಲರಮೂಲೆ, ವೇದಾವತಿ ಕೊನ್ನೋಡಿ, ಸದಸ್ಯರಾದ ಚಂಚಲಾಕ್ಷಿ ಹಾಸ್ಪಾರೆ, ವೆಂಕಮ್ಮ ಕೋಲ್ಚಾರು, ಸಂಧ್ಯಾ ಕೊಲ್ಲರಮೂಲೆ, ಕುಸುಮಾವತಿ ಕೊಯಿಂಗಾಜೆ, ಶಾಲಿನಿ ಪರಮಂಡಲ, ಶಂಕರಿ ಕೋಲ್ಚಾರು, ವಿ.ಹೆಚ್.ಪಿ ಅಧ್ಯಕ್ಷ ಚಿದಾನಂದ ಕೋಲ್ಚಾರು, ಜಗದೀಶ್ ಕೂಳಿಯಡ್ಕ, ಪ್ರದೀಪ್ ಕೊನ್ನೋಡಿ, ಗಣೇಶ್ ಕಣಕ್ಕೂರು, ಜಯರಾಜ್ ಕಣಕ್ಕೂರು, ಪುರುಷೋತ್ತಮ ಕೂಳಿಯಡ್ಕ, ಚಂದ್ರ ಕೊಚ್ಚಿ, ಗೋಪಾಲ ಮಾರ್ಡನಕೊಚ್ಚಿ, ದಿನೇಶ್ ಕೂಳಿಯಡ್ಕ, ಸುಭಾಶ್ ಕೊಯಿಂಗಾಜೆ, ಹರೀಶ್ ಪರಮಂಡಲ, ಶಿವಣ್ಣ ಕುಡೆಂಬಿ ಮತ್ತಿತರರು ಉಪಸ್ಥಿತರಿದ್ದರು.