ಸಂಪಾಜೆ ವಲಯ ಅರಣ್ಯ ಇಲಾಖೆಯ ಮೂವರಿಗೆ ಮುಂಭಡ್ತಿ ಇಬ್ಬರು ವರ್ಗಾವಣೆ

0

ಸಂಪಾಜೆ ವಲಯ ಅರಣ್ಯ ಇಲಾಖೆಯ ಐದು ಮಂದಿ ಸಿಬ್ಬಂದಿಗಳ ಪೈಕಿ ಮೂರು ಜನ ಮುಂಭಡ್ತಿ ಹೊಂದಿ ವರ್ಗಾವಣೆಗೊಂಡಿದ್ದು, ಉಳಿದ ಇಬ್ಬರು ಸಿಬ್ಬಂದಿಗಳು ವರ್ಗಾವಣೆಗೊಂಡಿದ್ದು, ಕೊಡಗಿನ ವಿವಿಧ ವಲಯಗಳಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.

ಸಂಪಾಜೆ ವಲಯ ಅರಣ್ಯ ಇಲಾಖೆಯಲ್ಲಿ ಬೀಟ್ ಫಾರೆಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜನಾರ್ದನ ಅವರು ವಿರಾಜಪೇಟೆ ವಲ. ಯಕ್ಕೆ ಡಿ‌.ಆರ್.ಎಫ್.ಒ. ಆಗಿ ವರ್ಗಾವಣೆಗೊಂಡಿದ್ದು, ಬೀಟ್ ಫಾರೆಸ್ಟ್ ಆಗಿ ಕರ್ತವ್ಯದಲ್ಲಿದ್ದ ತಿಲಕ ಪಿ.ಕೆ. ಅವರು ಡಿ.ಆರ್.ಎಫ್.ಒ. ಆಗಿ ಮಡಿಕೇರಿ ವಲಯಕ್ಕೆ ವರ್ಗಾವಣೆಯಾಗಿದ್ದು, ಬೀಟ್ ಫಾರೆಸ್ಟ್ ಆಗಿದ್ದ ಚಂದ್ರಪ್ಪ ಅವರು ಶನಿವಾರಸಂತೆ ವಲಯಕ್ಕೆ ಡಿ.ಆರ್.ಎಫ್.ಒ. ಆಗಿ ವರ್ಗಾವಣೆಗೊಂಡು ಅಧಿಕಾರ ವಹಿಸಿಕೊಂಡಿದ್ದಾರೆ.

ಸಂಪಾಜೆ ವಲಯದಲ್ಲಿ ಡಿ.ಆರ್.ಎಫ್.ಒ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಸಾರ್ ಮಹಮ್ಮದ್ ಅವರು ಪೊನ್ನಂಪೇಟೆ ವಲಯಕ್ಕೆ ವರ್ಗಾವಣೆಗೊಂಡಿದ್ದು, ಡಿ.ಆರ್.ಎಫ್.ಒ. ಆಗಿದ್ದ ಬಸವರಾಜ್ ಅವರು ವಿರಾಜಪೇಟೆ ವಲಯಕ್ಕೆ ವರ್ಗಾವಣೆಗೊಂಡು ಅಧಿಕಾರ ವಹಿಸಿಕೊಂಡಿದ್ದಾರೆ.