ಮಾ.21ರಂದು ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ವತಿಯಿಂದ ಮಜಿಲೀಸ್ ನೂರ್ ಹಾಗೂ ಇಫ್ತಾರ್ ಕೂಟ

0

ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಅಧೀನದಲ್ಲಿರುವ ಎಸ್. ಕೆ. ಎಸ್ .ಎಸ್. ಎಫ್. ಶಾಖೆಯ ವತಿಯಿಂದ ಮಜಿಲೀಸ್ ನ್ನೂರ್ ಹಾಗೂ ಇಫ್ತಾರ್ ಕೂಟವು ಮಾ.21 ರಂದು ಅಸರ್ ನಮಾಜಿನ ಬಳಿಕ ಅರಂತೋಡು ಮಸೀದಿಯ ವಠಾರದಲ್ಲಿ ನಡೆಯಲಿದೆ.

ಅರಂತೋಡು ಮಸೀದಿಯ ಖತೀಬರಾದ ಇಸ್ಮಾಯಿಲ್ ಗಟ್ಟಮನೆ ಅವರು ಮಜಿಲೀಸ್ ನಿರ್ವಹಿಸಲಿದ್ದಾರೆ.
ಅರಂತೋಡು ಎಸ್. ಕೆ. ಎಸ್. ಎಸ್.ಎಫ್. ಶಾಖೆಯ ಅಧ್ಯಕ್ಷ ಜುಬೇರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ. ಶಹೀದ್, ಜಮಾತ್ ಕಾರ್ಯದರ್ಶಿ ಕೆ.ಎಂ. ಮೂಸಾನ್, ಸದರ್ ಮುಅಲ್ಲಿಂ ನೌಶಾದ್ ಅಝ್ಹರಿ ,ಸಹಾಯಕ ಅದ್ಯಾಪಕ ಶಾಫಿ ಮುಸ್ಲಿಯಾರ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಮಜೀದ್, ನುಸ್ರತುಲ್ ಇಸ್ಲಾಂ ಮದರಸ ಸಂಚಾಲಕ ಅಮೀರ್ , ಎಸ್. ಕೆ. ಎಸ್ .ಎಸ್. ಎಫ್. ಕಾರ್ಯದರ್ಶಿ ಸಂಶುದ್ದೀನ್ ಸೇರಿದಂತೆ ಧಾರ್ಮಿಕ ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ.