ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಜಲದಿನ

0

ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮಾರ್ಚ್ 22ರಂದು ವಿಶ್ವ ಜಲ ದಿನದ ಪ್ರಯುಕ್ತ ನಡೆದ ಚಟುವಟಿಕೆ ಕಾರ್ಯಕ್ರಮವನ್ನು ಸಂಸ್ಥೆಯ ವಿದ್ಯಾರ್ಥಿನಿಯರು ನೀರನ್ನು ಉಳಿಸಿ ಸಂರಕ್ಷಿಸಬೇಕು ಎನ್ನುವ ಗೀತೆಯೊಂದಿಗೆ ಪ್ರಾರಂಭಿಸಿದರು. ತದನಂತರ ಜಲ ಸಂರಕ್ಷಣೆ ಹಾಗೂ ಜೀವಿಗಳ ಉಗಮವೇ ನೀರಿನಿಂದ ಎಂಬ ಮಾತುಗಳನ್ನು ಕೃಷ್ಮಾ ಮತ್ತು ಲಾಸ್ಯ ಸ್ಥೂಲವಾಗಿ ತಿಳಿಸಿಕೊಟ್ಟರು. ನೀರನ್ನು ಸಂರಕ್ಷಣೆ ಮಾಡವ ವಿಷಯವನ್ನು ಮೈಮ್ ಶೋ ಮಾಡುವುದರೊಂದಿಗೆ ಪ್ರದರ್ಶಿಸಿದರು. ವಿದ್ಯಾರ್ಥಿಗಳಿಗೆ ನೀರಿನ ಸಂರಕ್ಷಣೆಯ ಬಗ್ಗೆ ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಂಡು ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದ ಯೋಗ ಶಿಕ್ಷಣ ಪರಿಕ್ಷಕರಾದ ಎ.ಸಿ. ಸಂಜಯ್ ಹಾಗೂ ಸಂಸ್ಥೆಯ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.