ಬಳ್ಪ: ಕಲ್ಲೆಬಾಗಿಲು – ಕುಮನಪಾಳ್ಯ‌ ರಸ್ತೆ ಫಲಾನುಭವಿಗಳಿಂದ ವಿನೋದ್ ಬೊಳ್ಮಲೆಯವರಿಗೆ ಸನ್ಮಾನ

0

ಹಲವು ಕೋಟಿ ಅನುದಾನಗಳ‌ ಮೂಲಕ ಸಂಸದರ ಆದರ್ಶ ಗ್ರಾಮವಾದ ಬಳ್ಪ ಗ್ರಾಮದ ಹಲವು ರಸ್ತೆಗಳು ಕಾಂಕ್ರಿಟೀಕರಣಗೊಂಡಿದ್ದು, ಇದರ ಹಿಂದೆ ಶ್ರಮವಹಿಸಿದ ಬಳ್ಪ‌ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆಯವರನ್ನು ಕಲ್ಲೆಬಾಗಿಲು – ಕುಮನಪಾಳ್ಯ‌ ರಸ್ತೆ ಫಲಾನುಭವಿಗಳು ಸನ್ಮಾನಿಸಿದರು.
ಕುಮನಪಾಳ್ಯ‌ ನೇಮೋತ್ಸವದ ಸಂದರ್ಭದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ರವೀಂದ್ರ ರೈ ಗುತ್ತುಮನೆ, ರಾಮಚಂದ್ರ ಎಂರ್ಬಿಲ, ಚೆನ್ನಪ್ಪ ಗೌಡ ಸೂಂತಾರು ವಿನೋದ್ ಬೊಳ್ಮಲೆಯವರನ್ನು‌ ಸನ್ಮಾನಿಸಿದರು. ಮಹೇಶ್ ಸೂಂತಾರು ಕಾರ್ಯಕ್ರಮ ನಿರೂಪಿಸಿದರು. ಊರಿನ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.