ಅಲೆಕ್ಕಾಡಿ : ಗೃಹ ಪ್ರವೇಶದ ಪ್ರಯುಕ್ತ ಸ್ನೇಹ ಸಮ್ಮಿಲನ- ಸನ್ಮಾನ-ಡ್ಯಾನ್ಸ್ ಕಾರ್‍ಯಕ್ರಮ

0

ಅಲೆಕ್ಕಾಡಿ ಸಂತೋಷ್‌ಕುಮಾರ್ – ಶ್ರೀಮತಿ ಯಶೋಧ ದಂಪತಿಗಳು ನೂತನವಾಗಿ ನಿರ್ಮಿಸಿದ ಶ್ರೀ ಲಕ್ಷ್ಮಿ ನಿಲಯದ ಗೃಹಪ್ರವೇಶದ ಕುತ್ತಿಪೂಜೆಯ ಪ್ರಯುಕ್ತ ಮಾ.3೦ ಸ್ನೇಹ ಸಮ್ಮಿಲನ, ಸನ್ಮಾನ ಮತ್ತು ಡ್ಯಾನ್ಸ್ ಕಾರ್ಯಕ್ರಮ ನಡೆಯಿತು. ಮಂಗಳೂರು ಅಡ್ಯಾರ್ ಪದವು ಡ್ಯಾನ್ಸ್ ಸ್ಟಾರ್‍ಸ್ ಸ್ಟುಡಿಯೋದವರ ಡ್ಯಾನ್ಸ್ ಕಾರ್‍ಯಕ್ರಮವು ಸ್ನೇಹ ಸಮ್ಮಿಲನಕ್ಕೆ ಮೆರುಗು ನೀಡಿತು. ಸಂತೋಷ್ ಕುಮಾರ್‌ರವರ ಶಿಕ್ಷಕಿ ಶ್ರೀಮತಿ ಜಾನಕಿ ವೆಂಕಪ್ಪ ಗೌಡರನ್ನು ಸನ್ಮಾನಿಸಲಾಯಿತು. ಅಲೆಕ್ಕಾಡಿ ತರವಾಡು ಮನೆಯ ಹಿರಿಯ ಸದಸ್ಯರಾದ ದಿ.ಶೀನಪ್ಪ ಪೂಜಾರಿಯವರ ಪುತ್ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ತ್ರಿ ಪಾತ್ರದಾರಿ ದಯಾನಂದ್ ಕುಂತೂರವರನ್ನು ಸನ್ಮಾನಿಸಲಾಯಿತು.

ಸ್ಥಳೀಯ ಪ್ರತಿಭೆ ಹಾಗೂ ರಾಷ್ಟ್ರ ಯೋಗಪಟು ಚಿಕ್ಮುಳಿಯ ಕು. ತನ್ವಿ ಮತ್ತು ಅಲೆಕ್ಕಾಡಿ ಕು. ನಿಧಿ ಮತ್ತು ಎಣ್ಮೂರು ಪಟ್ಟೆ ಸುಜಿತ್ ರೈಯವರ ಪುತ್ರಿ ಕು. ಆಸ್ಮಿ ಹಾಗೂ ಸಂತೋಷ್ ಕುಮಾರ್‌ರವರ ಕಂಪನಿಯ ಮೆನೇಜರ್‌ ಗುಣಶ್ರೀಯವರು ವೈವಿಧ್ಯಮಯವಾದ ಡ್ಯಾನ್ಸ್ ಮಾಡಿ ಮನರಂಜಿಸಿದರು. ಚಿಕ್ಮುಳಿಯ ಯೋಗಪಟು ತನ್ವಿ ಯೋಗ ಪ್ರದರ್ಶನ ನೀಡಿದರು. ಸಂತೋಷ್ ಕುಮಾರ್‌ರವರ ಕ್ಲಾಸ್ ಮೆಟ್ ,ಶಾಸಕಿ ಭಾಗೀರಥಿ ಮುರುಳ್ಯ ಉಪಸ್ಥಿತರಿದ್ದರು.ತರವಾಡು ಮನೆಯ ಹಿರಿಯ ಸದಸ್ಯರಾದ ಚಂದ್ರಾವತಿ ಕರ್ಕೆರ ಮತ್ತು ಕುಟುಂಬಸ್ಥರು, ಬಂಧು ಮಿತ್ರರು ಅಲ್ಲದೆ ಬೆಂಗಳೂರಿನ ಕಂಪನಿಯ ಡಿ.ಜಿ.ಯಂ.,ಎಚ್.ಆರ್ . ಗಳು ಹಾಜರಿದ್ದು ಸೌತ್ ಇಂಡಿಯ ಫುಡ್, ನಾರ್ಥ್ ಇಂಡಿಯನ್ ಫುಡ್ – ವೆಜ್- ನಾನ್ ವೆಜ್, ವಿವಿಧ ರೀತಿಯ ಪಾನಿಯಗಳು ವಿಭಿನ್ನ ರೀತಿಯ ಅತಿಥಿ ಸತ್ಕಾರಗಳು ನಡೆಯಿತು.ಸಹಸ್ರರಾರು ಜನರು ಭಾಗವಹಿಸಿದರು.