ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಬೇಸಿಗೆ ಶಿಬಿರ

0

ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಎ. 1ರಂದು ಬೇಸಿಗೆ ಶಿಬಿರ ಪ್ರಾರಂಭವಾಯಿತು. ಶಿಬಿರವನ್ನು ಸಂಸ್ಥೆಯ ಪೋಷಕರಾದ ಹರಿಪ್ರಸಾದ್ ಜಯನಗರ ಉದ್ಘಾಟಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಪ್ರಮುಖರಾದ ಹೇಮಚಂದ್ರ ಮೇಕರ್ಜೆ, ಸಂಸ್ಥೆಯ ಆಡಳಿತ ಅಧಿಕಾರಿ ಗೋಪಾಲ್ ರಾವ್ ಶಿಬಿರಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಡಾl ಗೋಪಾಲಕೃಷ್ಣ ಕಾಟೂರು, ಹಾಗೂ ಶಶಿಧರ್ ಎಂ ಉಪಸ್ಥಿರಿದರು. ಶಾಲೆಯ ಮುಖ್ಯೋಪಾಧ್ಯಯರು, ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಅರ್ಚನಾ ಕೆ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕ ಶಶಿಧರ್ ಎಂ ವಂದಿಸಿದರು.