ಕಲ್ಲುಗುಂಡಿ ಸ್ಟಡಿ ಲಿಂಕ್ ಟ್ಯುಟೋರಿಯಲ್ಸ್ ತರಬೇತಿ ಕೇಂದ್ರದ 9 ವಿದ್ಯಾರ್ಥಿಗಳು ಜವಾಹರ್ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಅರ್ಹತೆ

0

ಜನವರಿ ತಿಂಗಳಲ್ಲಿ ನಡೆದ ಜವಾಹರ್ ನವೋದಯ ವಿದ್ಯಾಲಯದ ಆರನೇ ತರಗತಿ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಸ್ಟಡಿ ಲಿಂಕ್ ಟ್ಯುಟೋರಿಯಲ್ಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ 9 ವಿದ್ಯಾರ್ಥಿಗಳು ಜವಾಹರ್ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಮೊದಲ ಸುತ್ತಿನಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ.

ಚೆಂಬು ಗ್ರಾಮದ ತಾಯಿರಕಟ್ಟೆ ಆನಂದ- ಪ್ರೇಮ ರವರ ಪುತ್ರ ದೇವಿ ಪ್ರಸಾದ್, ಕೊಯನಾಡು ಕುಂದಲ್ಪಾಡಿ ಪದ್ಮನಾಭ – ಚಂದ್ರಕಲಾ ರವರ ಪುತ್ರಿ ಮಿಥಾಲಿ ಕೊಯ್ನಾಡು, ಅರಂತೋಡು ಬಾಲಕೃಷ್ಣ ರೈ- ಜಯಂತಿ ರೈಯವರ ಪುತ್ರಿ ಮಾನ್ಯ ವಿ. ರೈ, ತೋಡು ಕಲ್ಲುಗದ್ದೆ ಮಣಿಕಂಠ- ಜಯಂತಿಯವರ ಪುತ್ರಿ ಜಾನ್ವಿ ಕೆ.ಎಂ., ಸಂಪಾಜೆ ಗ್ರಾಮದ ಕೀಲಾರು ಮನೆ ಶರತ್- ರಜನಿಯವರ ಪುತ್ರಿ ಧೃತಿ ಕೆ ಎಸ್., ಪುತ್ತೂರು ಪಿಲಿಗುಂಡಮನೆ ಮನ್ಮಥ- ಪ್ರಣಿತ ರವರ ಪುತ್ರಿ ಮಾನ್ವಿ ಪಿ.ಎಂ., ಕೊಯಿನಾಡು ಅರುಣಗುಂಜ- ವಿಜಯ್ ಕುಮಾರ್ ರೂಪರವರ ಪುತ್ರ ಲೇಖನ್ ಎ.ವಿ., ಅರಂತೋಡು ನೀರಬಿದಿರೆ ಪ್ರಶಾಂತ್ -ಸುಮಲತಾ ರವರ ಪುತ್ರಿ ತ್ರಿಶಾಲಿ ಎನ್. ಪಿ., ಚೆಂಬು ಗ್ರಾಮದ ಆನೆಹಳ್ಳ ಕೃಷ್ಣಪ್ಪ- ವಾಣಿಯವರ ಪುತ್ರ ಹೇಮಂತ್ ಬಿ.ಕೆ. ಆಯ್ಕೆಯಾಗಿದ್ದಾರೆ.