ಎಂ.ಎಲ್.ಭವಾನಿ ಶಂಕರ್ (ಬಿ.ಎಸ್.ಸರ್ದಾರ್) ಶ್ರದ್ಧಾಂಜಲಿ ಸಭೆ

0

ಮುರುಳ್ಯದ ಎಂ.ಎಲ್.ಭವಾನಿಶಂಕರ್ (ಬಿ. ಎಸ್. ಸರ್ದಾರ್)ಇತ್ತೀಚಿಗೆ ನಿಧನ ಹೊಂದಿದ್ದು ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆಯು ಮುರುಳ್ಯದ ಶಾಂತಿನಗರ ಸ್ವಗೃಹದ ವಠಾರದಲ್ಲಿ ಎ.5 ರಂದು ನಡೆಯಿತು.

ಅವರಿಗೆ ಬೇಲೂರು ಶಿಕ್ಷಕ ಯು. ಕೃಷ್ಣ ,ರಾಜ್ಯ ಅರೆ ಭಾಷೆ ಅಕಾಡೆಮಿಯ ಸದಸ್ಯ ಡಾ. ಎನ್.ಎ.ಜ್ಞಾನೇಶ್, ನಿವೃತ್ತ ಶಾಲಾ ಶಿಕ್ಷಕ ಕೆ. ನಾರಾಯಣ ಭಟ್, ಮೃತರ ಸೊಸೆ ಚೇತನ ಕಿಶನ್ ಮುರುಳ್ಯರವರು ಗುಣಗಾನ ಮಾಡಿ ನುಡಿ ನಮನ ಸಲ್ಲಿಸಿದರು.

ಹಿರಿಯ ಸಹೋದರ ಭಾಸ್ಕರ ಗೌಡ ಮುರುಳ್ಯ ದೀಪ ಬೆಳಗಿಸಿ ಪುಷ್ಪಾರ್ಚನೆ ಗೈದರು. ಕುಟುಂಬ ಸದಸ್ಯರು, ಬಂಧು ಮಿತ್ರರು ಹಿತೈಷಿಗಳು ಉಪಸ್ಥಿತರಿದ್ದರು. ದಿವೀಶ್ ಮುರುಳ್ಯ ಕಾರ್ಯಕ್ರಮ ನಿರೂಪಿಸಿದರು. ( ವರದಿ; ಎ. ಎಸ್. ಸಾಲ್ಯಾನ್)