ವಿಧಾನ ಪರಿಷತ್ ಚುನಾವಣೆ : ಎಂ ವೆಂಕಪ್ಪ ಗೌಡ, ಎನ್. ಜಯಪ್ರಕಾಶ್ ರೈ , ಕೆ.ಎಂ. ಮುಸ್ತಫ ಉಸ್ತುವಾರಿಗಳಾಗಿ ನೇಮಕ

0

ಜೂನ್ 3 ರಂದು ಕರ್ನಾಟಕ ವಿಧಾನಪರಿಷತ್ ಗೆ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರ ದಿಂದ ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಯಾಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸುಳ್ಯದ ಮೂವರು ಕಾಂಗ್ರೆಸ್ ನಾಯಕರನ್ನು ನೇಮಕ ಮಾಡಲಾಗಿದೆ.

ಪುತ್ತೂರು ಬ್ಲಾಕ್ ಶಿಕ್ಷಕರ ಕ್ಷೇತ್ರ ಉಸ್ತುವಾರಿಯಾಗಿ ಸುಳ್ಯದ ನ್ಯಾಯವಾದಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪಗೌಡ ಇವರನ್ನು ನೇಮಿಸಲಾಗಿದೆ.ಪುತ್ತೂರು ಬ್ಲಾಕ್ ಪದವೀಧರ ಕ್ಷೇತ್ರ ಉಸ್ತುವಾರಿ ಡಿಸಿಸಿ ಉಪಾಧ್ಯಕ್ಷ ಎನ್. ಜಯಪ್ರಕಾಶ್ ರೈ, ಉಪ್ಪಿನಂಗಡಿ ಬ್ಲಾಕ್ ಪದವೀಧರ ಕ್ಷೇತ್ರ ಉಸ್ತುವಾರಿ ಕೆಪಿಸಿಸಿ ಮೈನಾರಿಟಿ ಜನರಲ್ ಸೆಕ್ರೆಟರಿ ಮುಸ್ತಫ ಸುಳ್ಯ ಇವರನ್ನು ನೇಮಿಸಲಾಗಿದೆ ಎಂದು ಡಿಸಿಸಿ ಅಧ್ಯಕ್ಷ ರ ಪ್ರಕಟಣೆ ತಿಳಿಸಿದೆ ಉಸ್ತುವಾರಿಗಳು ಮುಂಬರುವ ಚುನಾವಣೆ ಯಲ್ಲಿ ತಮ್ಮನ್ನು ಸಂಪೂರ್ಣ ವಾಗಿ ತೊಡಗಿಸಿ ಕೊಂಡು ಪಕ್ಷದ ಅಭ್ಯರ್ಥಿಗಳಾದ ಡಾ ಮಂಜುನಾಥ್ ಮತ್ತು ಆಯಾನೂರು ಮಂಜುನಾಥ್ ರವರ ಗೆಲುವಿಗೆ ಶ್ರಮಿಸಬೇಕೆಂದು ಡಿಸಿಸಿ ಅಧ್ಯಕ್ಷರು ಪತ್ರದ ಮೂಲಕ ತಿಳಿಸಿರುತ್ತಾರೆ.