ಪಂಜ:ನೂತನ ಒಕ್ಕೂಟ ರಚನೆ

0

ಅಧ್ಯಕ್ಷ: ಪ್ರಕಾಶ್ ಜಾಕೆ, ಕಾರ್ಯದರ್ಶಿ: ಹರಿಶ್ಚಂದ್ರ ಪರ್ಲ, ಕೋಶಾಧಿಕಾರಿ: ಭವಾನಿ ಶಂಕರ ಪಲ್ಲೋಡಿ

ಪಂಜ:ನೂತನ ಒಕ್ಕೂಟ ರಚನೆ ಅಧ್ಯಕ್ಷ: ಪ್ರಕಾಶ್ ಜಾಕೆ, ಕಾರ್ಯದರ್ಶಿ: ಹರಿಶ್ಚಂದ್ರ ಪರ್ಲ, ಕೋಶಾಧಿಕಾರಿ: ಭವಾನಿ ಶಂಕರ ಪಲ್ಲೋಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ )ಐವತೋಕ್ಲು ಕಾರ್ಯಕ್ಷೇತ್ರದಲ್ಲಿ ನೂತನ ಪಂಜ ಒಕ್ಕೂಟ ರಚನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸುಳ್ಯ ತಾಲ್ಲೂಕು ಯೋಜನಾಧಿಕಾರಿ ಮಾಧವ ಗೌಡ ರವರು ಒಕ್ಕೂಟದ ಬಗ್ಗೆ, ಗ್ರಾಮಾಭಿವೃದ್ಧಿ ಯೋಜನೆ ಬಗ್ಗೆ ಮಾಹಿತಿ ನೀಡಿದರು

. ವಲಯದ ಮೇಲ್ವಿಚಾರಕಿ ಶ್ರೀಮತಿ ಕಲಾವತಿ, ವಲಯ ಅಧ್ಯಕ್ಷ ಧರ್ಮಪಾಲ ಕಣ್ಕಲ್ ರವರು ಒಕ್ಕೂಟ ರಚನೆ ಯ ನಿಯಮಗಳನ್ನು ವಿವರಿಸಿದರು. ನೂತನ ಒಕ್ಕೂಟದ ಅಧ್ಯಕ್ಷರಾಗಿ ಪ್ರಕಾಶ್ ಜಾಕೆ, ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಪರ್ಲ ನೆಕ್ಕಿಲ, ಕೋಶಾಧಿಕಾರಿಯಾಗಿ ಭವಾನಿಶಂಕರ ಪಲ್ಲೋಡಿ, ದಾಖಲಾತಿ ಸಮಿತಿ ಸದಸ್ಯರಾಗಿ ಭಾರತಿ ಗುಂಡಡ್ಕ, ಜಯಂತಿ ಅಡ್ಕ ಆಯ್ಕೆ ಗೊಂಡರು.

ನೂತನ ಅಧ್ಯಕ್ಷ ಪ್ರಕಾಶ್ ಜಾಕೆ ಶುಭ ಹಾರೈಸಿದರು.ಒಕ್ಕೂಟದ ಸಭೆಯನ್ನು ಪ್ರತಿ ತಿಂಗಳ 4ನೇ ಆದಿತ್ಯವಾರ ನಡೆಸುವುದಾಗಿ ಸದಸ್ಯರು ಸೇರಿ ನಿರ್ಣಯಿಸಲಾಯಿತು. ಐವತ್ತೊಕ್ಲು /ಪಂಜ ಒಕ್ಕೂಟದ ಸೇವಾಪ್ರತಿನಿಧಿ ಶ್ರೀಮತಿ ರೋಹಿಣಿ ಆರ್ನೋಜಿ ಸ್ವಾಗತಿಸಿದರು ಮತ್ತು ವಂದಿಸಿದರು.