ಕೊಲ್ಲಮೊಗ್ರ ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತ ಸಂಭ್ರಮ ಕಾರ್ಯಕ್ರಮ ಆರಂಭ

0

ಸಹಕಾರಿ ಧ್ವಜ ಧ್ವಜಾರೋಹಣ, ಪೆಟ್ರೋಲ್ ಬಂಕ್ ಗೆ ಶಿಲಾನ್ಯಾಸ

ಕೊಲ್ಲಮೊಗ್ರ ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಯಶಸ್ವಿ ೧೦೦ ವರ್ಷಗಳನ್ನು ಪೂರೈಸಿದ್ದು, ಇದರ ಸವಿ ನೆನಪಿಗಾಗಿ ಶತ ಸಂಭ್ರಮ ಕಾರ್ಯಕ್ರಮ ಇಂದು ಆರಂಭಗೊಂಡಿದೆ.

ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಸಹಕಾರ ಧ್ವಜಾ ರೋಹಣವನ್ನು ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ನೆರವೇರಿಸಿದರು. ಶತಮಾನೋತ್ಸವ ನಾಮಫಲಕ ಅನಾವರಣವನ್ನು ಕೌಶಲ್ ಶೆಟ್ಟಿ ಮತ್ತು ಡಿಸಿಸಿ ಬ್ಯಾಂಕ್ ನಿರ್ದೆಶಕ ಶಶಿಕುಮಾರ್ ಬಾಲ್ಯೋಟ್ಟು ನೆರವೇರಿಸಿದರು.

ನೂತನ ಪೆಟ್ರೋಲ್ ಪಂಪು ಕಟ್ಟಡಕ್ಕೆ ಶಿಲಾನ್ಯಾಸವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ನಿರ್ದೇಶಕ ಶಶಿಕುಮಾರ್ ಬಾಲ್ಯೋಟ್ಟು ನೆರವೇರಿಸಿದರು.

ಮೆರವಣಿಗೆಗೆ ಮಂಗಳೂರು ಕೆ.ಎಂ.ಎಫ್. ಅಧ್ಯಕ್ಷರಾದ ಸುಚರಿತ ಶೆಟ್ಟಿ ಚಾಲನೆ ನೀಡಿದರು.

ಸುಳ್ಯ ಶಾಸಕರಾದ ಕು. ಭಾಗೀರಥಿ ಮುರುಳ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿದ್ದಾರೆ