ಬೆಳ್ಳಾರೆ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳ ಜೊತೆ ಗುಂಪು ಸಲಹೆ ಕಾರ್ಯಕ್ರಮ

0

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರದಲ್ಲಿ ಇಂದು ಮಂಗಳೂರಿನ ತುಂಗಾಸ್ ಮನಸ್ವಿ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಸುಮನಾ ಪಿಂಟೋ ರವರು ಶಿಬಿರಾರ್ಥಿಗಳಿಗೆ ಗುಂಪು ಸಲಹೆ ನೀಡಿದರು.


ಶಿಬಿರ ಪ್ರಾರಂಭವಾಗಿ ಐದನೇ ದಿನವಾದ ಇಂದು ಗುಂಪು ಸಮಾಲೋಚನೆ ನಡೆಯಿತು.
ಶಿಬಿರದಲ್ಲಿ 73 ಮಂದಿ ಶಿಬಿರಾರ್ಥಿಗಳಿದ್ದಾರೆ.
ಪ್ರತೀ ದಿನ ಭಜನೆ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ.