ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅಮರ ಯೋಗ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿ ಮಣಿಪ್ರಕಾಶ್ ಕಡೋಡಿ ಪ್ರಥಮ ಹಾಗೂ ಗೌರಿತ ಕೆ. ಜಿ. ಪಂಚಮ ಸ್ಥಾನ

0

ಪತಂಜಲಿ ಯೋಗ ಕೇಂದ್ರ (ರಿ.)ಬೆಂಗಳೂರು ಇವರು ನಡೆಸಿದ ಅಂತರ್ ಶಾಲಾ ಮತ್ತು ಕಾಲೇಜು ಹಾಗೂ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿ 05 ಮತ್ತು 6ನೇ ತರಗತಿ ಬಾಲಕರ ವಿಭಾಗದಲ್ಲಿ ಮಣಿಪ್ರಕಾಶ್ ಕಡೋಡಿ ಸ. ಕಿ ಪ್ರಾ. ಶಾಲೆ ವಾಲ್ತಾಜೆ,ಪ್ರಥಮ ಸ್ಥಾನ ಮತ್ತು 03 ಮತ್ತು 4ನೇ ತರಗತಿಯ ವಿಭಾಗದಲ್ಲಿ ಗೌರಿತಾ. ಕೆ. ಜಿ ಕುಮಾರ ಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇವರು ಪಂಚಮ ಸ್ಥಾನ ಗಳಿಸಿರುತ್ತಾರೆ.ಇವರುಗಳು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರಿನ
ಅಮರ ಯೋಗ ತರಬೇತಿ ಕೇಂದ್ರ ದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಅವರಿಂದ ಯೋಗ ತರಬೇತಿ ಪಡೆಯುತ್ತಿದ್ದಾರೆ.