ಕುಮಾರಧಾರಾ ನದಿಗೆ ಹಾರಿದ ಬೆಂಗಳೂರಿನ ವ್ಯಕ್ತಿಯ ರಕ್ಷಣೆ

0


ಬೆಂಗಳೂರಿನ ವ್ಯಕ್ತಿಯೊಬ್ಬರು ಕುಮಾರಧಾರಾ ನದಿಗೆ ಹಾರಿದ ಹಾಗೂ ಈಜುಗಾರರು ಮತ್ತು ಅಗ್ನಿಶಾಮಕ ದಳದವರು ಪೊಲೀಸರ ನೆರವಿನೊಂದಿಗೆ ಆ ವ್ಯಕ್ತಿಯನ್ನು ರಕ್ಷಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.


ಈ ಅಪರಿಚಿತ ವ್ಯಕ್ತಿ ನದಿಗೆ ಹಾರಿದ್ದನ್ನು ಕಂಡ ಕೆಲವರು ಕಡಬ ಪೊಲೀಸರಿಗೆ ತಿಳಿಸಿದರೆಂದೂ, ಪೊಲೀಸರು ಅಗ್ನಿಶಾಮಕ ದಳದವರೊಂದಿಗೆ ಬಂದು ಸ್ಥಳಿಯರ ನೆರವಿನಿಂದ, ನದಿ ನೀರಲ್ಲಿ ಗೆಲ್ಲೊಂದನ್ನು ಹಿಡಿದುಕೊಂಡಿದ್ದ ಆ ವ್ಯಕ್ತಿಯನ್ನು ಮೇಲಕ್ಕೆತ್ತಿ ಕಡಬ ಆಸ್ಪತ್ರೆಗೆ ಸೇರಿಸಿದ್ದಾರೆಂದೂ ತಿಳಿದು ಬಂದಿದೆ.