ರಂಗತ್ತಮಲೆಯಲ್ಲಿ ಕಾಡಾನೆ ದಾಳಿ -ಕೃಷಿ ತೋಟಕ್ಕೆ ನುಗ್ಗಿ ಬೆಳೆ ನಾಶ

0

ಆಲೆಟ್ಟಿ ಗ್ರಾಮದ ಹಲವು ಕಡೆಗಳಲ್ಲಿ ನಿರಂತರವಾಗಿ ಕಾಡಾನೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಳೆದ ರಾತ್ರಿ ರಂಗತ್ತಮಲೆ ಎಂಬಲ್ಲಿ ರಮೇಶ್ ನಾಯ್ಕ್ ಎಂಬವರ ಕೃಷಿ ತೋಟಕ್ಕೆ ನುಗ್ಗಿ ಅಪಾರ ಹಾನಿಯುಂಟು ಮಾಡಿದೆ. ರಸ್ತೆಯ ಮೂಲಕ ಸಾಗಿ ಬಂದ ಆನೆಗಳು ನೇರವಾಗಿ ತೋಟಕ್ಕೆ ನುಗ್ಗಿ ತೆಂಗಿನ ಮರಗಳನ್ನು ಮತ್ತು ಅಡಿಕೆ ಗಿಡಗಳನ್ನು ನಾಶ ಪಡಿಸಿರುವುದಾಗಿ ತಿಳಿದು ಬಂದಿದೆ.