ಅರಂತೋಡು ಜುಮಾಅತ್ ವತಿಯಿಂದ ಉಮ್ರಾ ಯಾತ್ರಿಕರಿಗೆ ಬೀಳ್ಕೊಡುಗೆ

0


ಅರಂತೋಡು ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿವತಿಯಿಂದ ಪವಿತ್ರ ಉಮ್ರಾ ಯಾತ್ರೆಗೆ ತೆರಳುತ್ತಿರುವ ಅರಂತೋಡು ಜಮಾಅತ್ ನ ಜೊತೆ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ ಮತ್ತು ಅವರ ಪುತ್ರರಾದ ಅಜ್ಮಲ್, ಅಕ್ಮಲ್ ಕುಕ್ಕುಂಬಳರವರಿಗೆ ಬೀಳ್ಕೊಡುಗೆ ಸಮಾರಂಭವು ಜು.8 ರಂದು ನಡೆಯಿತು. ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು.

ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರೆವೇರಿಸಿ ಶುಭ ಹಾರೈಸಿದರು. ತೆಕ್ಕಿಲ್ ಗ್ರಾಮೀಣಾಭಿವ್ರದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಅಮೀರ್ ಕುಕ್ಕುಂಬಳ ಮತ್ತು ಪುತ್ರರಿಗೆ ಶಾಲು ಹೊದಿಸಿ ಸನ್ಮಾನಿಸಿ ಮಾತನಾಡಿ ಅಮೀರ್ ಕುಕ್ಕುಂಬಳ ಮತ್ತು ಸಹೋದರರು ಬಹಳ ಶ್ರಮದಿಂದ ಉಧ್ಯಮದಲ್ಲಿ ತೊಂಡಗಿಸಿಕೊಂಡು ಮೇಲೆ ಬಂದವರು. ದುಡಿದರೆ ಫಲ ಸಿಗುತ್ತದೆ ಎಂಬುದಕ್ಕೆ ಇವರೇ ಸಾಕ್ಷಿ.

ಯುವಕರು ಸ್ವಾವಲಂಬಿಗಳಾಗಿ ಬದುಕಲು ಕಲಿಯಬೇಕೆಂದರು. ಮತ್ತು ಯಾತ್ರೆಗೆ ಶುಭಕೋರಿದರು. ಸದರ್ ನೌಶಾದ್ ಅಝ್ ಹರಿ, ಸಹಾಯಕ ಅದ್ಯಾಪಕ ಅಶ್ರಫ್ ಆಲಿಮುಸ್ಲಿಯಾರ್, ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ನಿರ್ದೇಶಕರುಗಳಾದ ಕೆ.ಎಂ ಮೊಯಿದು ಕುಕ್ಕುಂಬಳ, ಎ.ಹನೀಫ್ ಸಂಶುದ್ಧೀನ್ ಪೆಲ್ತಡ್ಕ, ಮನ್ಸೂರು ಪಾರೆಕ್ಕಲ್, ಮುಜೀಬ್, ದಿಕ್ರ್ ಸ್ವಲಾತ್ ಸಮಿತಿ ಅಧ್ಯಕ್ಷ ಕೆ.ಎಸ್. ಇಬ್ರಾಹಿಂ ಕುಕ್ಕುಂಬಳ, ಕಾರ್ಯದರ್ಶಿ ಸಂಶುದ್ದೀನ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್, ಕಾರ್ಯದರ್ಶಿ ಸಂಶುದ್ದೀನ್ ಕ್ಯೂರ್, ಎ.ಹೆಚ್.ವೈ.ಎ ಕೋಶಾಧಿಕಾರಿ ಹಾಜಿ ಅಝಾರುದ್ದೀನ್, ಎಸ್.ಇ.ಮೊಯಿದು ಕುಟ್ಟಿ, ಎ.ಹಮೀದ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ಎಂ ಮೂಸಾನ್ ಸ್ವಾಗತಿಸಿ ನಿರೂಪಿಸಿದರು.