ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ, ಮಾಧವ ಸುಳ್ಳಿ ಅಸೌಖ್ಯದಿಂದ ನಿಧನ

0

ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ‌ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಾಧವ ಗೌಡ ಸುಳ್ಳಿ ಎಂಬವರು ಇದೀಗ ಸುಳ್ಯದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸುಮಾರು 62 ವರ್ಷ ಪ್ರಾಯವಾಗಿತ್ತು.

ನೆಲ್ಲೂರು ಕೆಮ್ರಾಜೆ ಗ್ರಾಮದ ಸುಳ್ಳಿ ದಿ| ಲಿಂಗಪ್ಪ ಗೌಡರವರ ಪುತ್ರ ಮಾಧವ ಗೌಡರು ಕೆಲ ಸಮಯದಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಇಂದು ಕೂಡ ಡಯಾಲಿಸಿಸ್ ಗೆಂದು ಸುಳ್ಯದ ಆಸ್ಪತ್ರೆಗೆ ಹೋಗಿದ್ದ ಸಂದರ್ಭ ಒಮ್ಮೊಂದೊಮ್ಮೆಲೆ ರಕ್ತದೊತ್ತಡ ಕಡಿಮೆಯಾಗಿ‌ ಚಿಕಿತ್ಸೆಗೆ ಸ್ಪಂಧಿಸದೇ ಮೃತಪಟ್ಟರೆಂದು ತಿಳಿದು ಬಂದಿದೆ. ‌

ಮಾಧವರವರು ನೆಲ್ಲೂರು ಕೆಮ್ರಾಜೆ ಯುವಕ ಮಂಡಲದ ಸಕ್ರಿಯ ಸದಸ್ಯರಾಗಿಯೂ ದುಡಿದಿದ್ದರು.

ಮೃತರು ಪತ್ನಿ ಪ್ರೇಮ, ಪುತ್ರ ಗೋಕಿರಣ್, ಇಬ್ಬರು ಪುತ್ರಿಯರು ಹಾಗೂ ಸಹೋದರ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.