ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪಂಜದ ತರುಣ್ ತೃತಿಯ

0

ಬೆಂಗಳೂರು ನಲ್ಲಿ ನಡೆದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ತರುಣ್ ಗೆ ತೃತಿಯ ಸ್ಥಾನ ಪಡೆದಿದ್ದಾರೆ.
ಜು.7 ರಂದು ಬೆಂಗಳೂರುನಲ್ಲಿ ಪತಂಜಲಿ ಯೋಗ ಕೇಂದ್ರ ( ರಿ.) ಬೆಂಗಳೂರು ಇವರು ನಡೆಸಿದ ಅಂತರ್ ಶಾಲಾ ಮತ್ತು ಕಾಲೇಜು ಹಾಗೂ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿರಂತರ ಯೋಗ ಕೇಂದ್ರ ಪಂಜ ವಿದ್ಯಾರ್ಥಿ 3 ಮತ್ತು 4 ನೇ ತರಗತಿಯ ಬಾಲಕರ ವಿಭಾಗ ದಲಿ ತರುಣ್. ಎ ತೃತಿಯ ಸ್ಥಾನ ಪಡೆದಿರುತಾರೆ. ಇವರು ಐವತೋಕ್ಲು ಗ್ರಾಮದ ಅಳ್ಪೆ ಮೇಲ್ಮನೆ ಸೀತಾರಾಮ ಗೌಡ ಮತ್ತು ಶ್ರೀಮತಿ ಪೂರ್ಣಿಮಾ ದಂಪತಿಗಳ ಪುತ್ರ. ಕರಿಕ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ನೇ ತರಗತಿ ವ್ಯಾಸಂಗ ಮಾಡುತಿದ್ದಾರೆ. ಇವರು ಯೋಗ ಶಿಕ್ಷಕ ಶರತ್ ಮಾರ್ಗಿಲಡ್ಕರವರ ಜೊತೆ ಮಾರ್ಗ ದರ್ಶನ ಪಡೆಯುತಿದ್ದಾರೆ.