ಕೂತ್ಕುಂಜ ಶಾಲೆಯಲ್ಲಿ ಅರಣ್ಯೀಕರಣ ಕಾರ್ಯಕ್ರಮ

0

ಸ.ಹಿ.ಪ್ರಾ.ಶಾಲೆ ಕೂತ್ಕುಂಜ ಇಲ್ಲಿ ಶಾಲೆಗೆ ಸಂಬಂಧಿಸಿದ ಖಾಲಿ ಜಾಗದಲ್ಲಿ ದೇವಿಪ್ರಸಾದ್ ಕಿನ್ನಿಕುಮೇರಿ ಮತ್ತು ಲಕ್ಷ್ಮೀಶ ಕೂತ್ಕುಂಜರವರ ಪ್ರಾಯೋಜಕತ್ವದಲ್ಲಿ ಅರಣ್ಯೀಕರಣ ಮಾಡುವ ಉದ್ದೇಶಕ್ಕಾಗಿ ಯುನಿವರ್ಸಲ್ ನಾಲೇಜ್ ಟ್ರಸ್ಟ್ ಮಂಗಳೂರು ಇವರ ಸಹಕಾರದಲ್ಲಿ ಜು.6 ರಂದು ವಿವಿಧ ಜಾತಿಯ ಸುಮಾರು 300 ಗಿಡಗಳನ್ನು ನೆಡಯವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದಲ್ಲಿ ಯುನಿವರ್ಸಲ್ ನಾಲೇಜ್ ಟ್ರಸ್ಟ್ ಮಂಗಳೂರು ಇದರ ಸಂಚಾಲಕ ವಿದ್ಯಾಶಂಕರ ಮತ್ತು ಸುಬ್ರಹ್ಮಣ್ಯ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ತುಳಸಿಕುಮಾರ್ ಮತ್ತು ಸದಸ್ಯರುಗಳು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀಧರ ಕಲ್ಲಾಜೆ ಹಾಗೂ ಸದಸ್ಯರು, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ತೆಸ್‌ಲೀನ, ಶಾಲಾ ವಿದ್ಯಾರ್ಥಿಗಳು, ಕಾರ್ಯಪ್ಪ ಗೌಡ ಚಿದ್ಗಲ್, ಶಿವರಾಮಯ್ಯ ಕರ್ಮಾಜೆ, ವೆಂಕಟೇಶ ಜೋಯಿಸ, ತಿಮ್ಮಪ್ಪ ಗೌಡ, ಪ್ರಜ್ವಲ್ ಚಿದ್ಗಲ್, ಪರಮೇಶ್ವರ ಭಟ್ ಕೂತ್ಕುಂಜ, ಜೈಶಂಕರ್ ಕರ್ಮಾಜೆ, ಊರಿನವರು ಉಪಸ್ಥಿತರಿದ್ದರು.