ಸುಳ್ಯ ಕಲ್ಕುಡ ದೈವಸ್ಥಾನದಲ್ಲಿ ಸ್ವರ್ಣ ಪ್ರಶ್ನಾ ಚಿಂತನೆಯ ಪೂಜಾ ಕಾರ್ಯಕ್ರಮ

0

ಸುಳ್ಯ ಗಾಂಧಿನಗರ ಕಲ್ಕುಡ ಕಲ್ಲುರ್ಟಿ ಗುಳಿಗ ದೈವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯದ ಪೂರ್ವ ಭಾವಿಯಾಗಿ ಜ್ಯೋತಿಷ್ಯರಾದ ಕೆ.ಮಹಾಲಿಂಗೇಶ್ವರ ಶರ್ಮ ಮಾರ್ಗದರ್ಶನದಲ್ಲಿ ಸ್ವರ್ಣ ಪ್ರಶ್ನಾ ಚಿಂತನೆಯ ಪೂಜಾ ಕೈಂಕರ್ಯವನ್ನು ಜು.12 ರಂದು ನೆರವೇರಿಸಲಾಯಿತು.


ಆರಂಭದಲ್ಲಿ ದೈವಸ್ಥಾನದ ಆಡಳಿತ ಧರ್ಮದರ್ಶಿ ಮೊಕ್ತೇಸರ ಪಿ.ಕೆ.ಉಮೇಶ್ ರವರು ಪ್ರಾರ್ಥಿಸಿದರು.


ಈ ಸಂದರ್ಭದಲ್ಲಿ ಕೃಪಾಶಂಕರ ತುದಿಯಡ್ಕ, ಧರ್ಮದರ್ಶಿ ಮಂಡಳಿಯ ಸದಸ್ಯರಾದ ಸೋಮನಾಥ ಪೂಜಾರಿ, ಭಾಸ್ಕರ ಗೌಡ ಐಡಿಯಲ್, ಚಂದ್ರಶೇಖರ ಸೆಂಚುರಿ, ಕೇಶವ ನಾಯಕ್ ಸುಳ್ಯ ಹಾಗೂ ಉದ್ಯಮಿ ಮಧುಸೂದನ್ ಕುಂಭಕೋಡು, ಶ್ರೀಮತಿ ಲತಾ ಮಧು ಸೂದನ್, ದೈವಸ್ಥಾನದ ಪೂಜಾರಿ ಗಳಾದ ಮೋನಪ್ಪ ಗೌಡ, ತಿಮ್ಮಪ್ಪ ಗೌಡ ನಾವೂರು ಉಪಸ್ಥಿತರಿದ್ದರು. ಸ್ಥಳೀಯ ಭಕ್ತಾದಿಗಳು ಸಹಕರಿಸಿದರು.