ಕನಕಮಜಲು ಸುಣ್ಣಮೂಲೆಯಲ್ಲಿ ಅಕ್ರಮ ದಾಸ್ತಾನು ಇರಿಸಿದ್ದ 347 ಬ್ಯಾಗ್ ಮೈಲ್ ತುತ್ತು ವಶ

0

ಕೃಷಿ ಇಲಾಖಾ ಅಧಿಕಾರಿಗಳ ಕಾರ್ಯಾಚರಣೆ

ಕನಕಮಜಲು ಗ್ರಾಮದ ಸುಣ್ಣಮೂಲೆಯಲ್ಲಿ ಅಕ್ರಮ ದಾಸ್ತಾನು ಇರಿಸಿದ್ದ 347 ಬ್ಯಾಗ್ ಮೈಲ್ ತುತ್ತನ್ನು ಕೃಷಿ‌ ಇಲಾಖಾಧಿಕಾರಿಗಳು‌ ವಶ ಪಡಿಸಿಕೊಂಡ ಘಟನೆ ವರದಿಯಾಗಿದೆ.

ಖಚಿತ ಮಾಹಿತಿ ಮೇರೆಗೆ ಸುಳ್ಯದ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಹಾಗೂ ಜಾರಿದಳದ ಸಹಾಯಕ ಕೃಷಿ ನಿರ್ದೇಶಕಿ ರಶ್ಮಿ ಇವರ ಜಿಲ್ಲಾ ತಂಡದವರು ಸುಣ್ಣಮೂಲೆಯ ಗೋಡಾನ್ ಗೆ ದಾಳಿ ನಡೆಸಿದರು. ಈ ವೇಳೆ ಗೋಡಾನ್ ನಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ 347 ಬ್ಯಾಗ್ ಮೈಲ್ ತುತ್ತು ಪತ್ತೆ ಯಾಗಿದ್ದು ಅದನ್ನು ವಶ ಪಡಿಸಿಕೊಂಡಿದ್ದಾರೆ.

ವಶ ಪಡಿಸಿಕೊಂಡ ಮೈಲ್ ತುತ್ತನ್ನು ಸುಳ್ಯ ಕೃಷಿ ಇಲಾಖೆಯ ಕಚೇರಿಗೆ ತರಲಾಗಿದೆ ಎಂದು ತಿಳಿದುಬಂದಿದೆ. ಕೇರಳ ಮೂಲದ ಸಜಿ ಹಾಗೂ ಸುರೇಶ್ ಕುಮಾರ್ ಇದನ್ನು ದಾಸ್ತಾನು ಇರಿಸಿದ್ದಾರೆಂದು ಮೇಲ್ನೋಟಕ್ಕೆ ಕಂಡು‌ಬಂದಿದ್ದು, ತನಿಖೆಯ ಬಳಿಕ ಮತ್ತಷ್ಟು ವಿಷಯಗಳು ಬೆಳಕಿಗೆ ಬರಬೇಕಾಗಿದೆ.