ಕ.ಸಾ.ಪ.ತಾಲೂಕು ಘಟಕದ ವಿಶೇಷ ಸಭೆ

0


ತಾಲೂಕು ಸಾಹಿತ್ಯ ಸಮ್ಮೇಳನ, ಗ್ರಾಮ ಸಾಹಿತ್ಯ ಹಬ್ಬ,ಶಾಲೆಗಳಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರ ಅನಾವರಣ ನಿರ್ಧಾರ


ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು
ಕ.ಸಾ.ಪ.ಹೋಬಳಿ ಘಟಕದ ವಿಶೇಷ ಸಭೆ ಜು.13ರಂದು ಸುಳ್ಯ ದ ಕನ್ನಡ ಭವನದಲ್ಲಿ ಕಸಾಪ ಅಧ್ಯಕ್ಷರಾದ ಚಂದ್ರಶೇಖರ ಪೇರಾಲುರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಡಿಸೆಂಬರ್ ತಿಂಗಳಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ, ಸುಳ್ಯ ಮತ್ತು ಪಂಜ ಹೋಬಳಿಯಲ್ಲಿ ತಲಾ ಎರಡು ಗ್ರಾಮ ಸಾಹಿತ್ಯ ಹಬ್ಬ ನಡೆಸುವ ಕುರಿತು, ರಾಜ್ಯಕ್ಕೆ ಕರ್ನಾಟಕ ನಾಮಕರಣವಾಗಿ 50ವರ್ಷವಾದ ಹಿನ್ನೆಲೆಯಲ್ಲಿ 50 ಶಾಲೆಗಳಲ್ಲಿ ಸಂಘ ಸಂಸ್ಥೆಗಳ, ದಾನಿಗಳ ನೆರವಿನಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವ ಚಿತ್ರ ಅನಾವರಣ,ಜಿಲ್ಲಾ ಕಸಾಪದ ಕಾರ್ಯಕಾರಿ ಸಭೆಯನ್ನು ಸುಳ್ಯದಲ್ಲಿ ನಡೆಸುವ ಬಗ್ಗೆ ನಿರ್ಧಾರ ಮಾಡಲಾಯಿತು.


ಸಭೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಶ್ರೀಮತಿ ಚಂದ್ರಮತಿ, ಗೌರವ ಕೋಶಾಧಿಕಾರಿ ದಯಾನಂದ ಆಳ್ವ, ಸುಳ್ಯ ಹೋಬಳಿ ಘಟಕದ ಅಧ್ಯಕ್ಷ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ,ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಹರೀಶ್ ಬಂಟ್ವಾಳ್, ಕಸಾಪ ನಿರ್ದೇಶಕರು, ಹೋಬಳಿ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.