ಅಂಜಲಿ ಮೊಂಟೆಸ್ಸರಿ ಸ್ಕೂಲ್‌ ಗೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸೀತಾರಾಮ ರೈ ಭೇಟಿ – ಗೌರವ

0

ಸುಳ್ಯದ ವರ್ತಕರ ಭವನದಲ್ಲಿ ಕಾರ್ಯಚರಿಸುತ್ತಿದ್ದ ಅಂಜಲಿ ಮೊಂಟೆಸ್ಸರಿ ಸ್ಕೂಲ್ ಆಯುರ್ವೇದ ಕಾಲೇಜು ಮುಂಭಾಗವಿರುವ ಅಡ್ಕಾರ್ ಆರ್ಕೆಡ್ ಗೆ ಜು.13 ರಂದು ಸ್ಥಳಾಂತರಗೊಡು ಶುಭಾರಂಭಗೊಂಡ ಹಿನ್ನಲೆಯಲ್ಲಿ
ಜು. 15 ರಂದು ಅಕಾಡೆಮಿಯ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷ ಕೆ.ವಿ.ಚಿದಾನಂದ, ಸವಣೂರು ವಿದ್ಯಾ ಸಂಸ್ಥೆ ಯ ಸ್ಥಾಪಕರಾದ ಸೀತಾರಾಮ ರೈ
ಭೇಟಿ ನೀಡಿ ಶಾಲಾ ನಿರ್ದೇಶಕಿ ಗೀತಾಂಜಲಿ ಟಿ.ಜಿ. ಯವರಿಗೆ ಶುಭ ಹಾರೈಸಿ,
ಗೌರವಿಸಿದರು.

ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಕೆವಿ, ಅಗ್ರೋ ಸಂಸ್ಥೆಯ ಮಾಲಕ ರಾಮಚಂದ್ರ ಭಟ್, ರೋ. ಪ್ರಭಾಕರ್ ನಾಯಕ್ , ಕಟ್ಟಡ ಮಾಲಕ ದಿನೇಶ್ ಅಡ್ಕಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.