ಬೆಳ್ಳಾರೆ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಮುಪ್ಪೇರ್ಯ 2 ನೇ ವಾರ್ಡಿನಿಂದ ದೇಣಿಗೆ

0

ಅಭಿವೃದ್ಧಿಗೊಳ್ಳುತ್ತಿರುವ ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭಕ್ತಾದಿಗಳಿಂದ ದೇಣಿಗೆ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಮುಪ್ಪೇರ್ಯ 2ನೇ ವಾರ್ಡಿನಿಂದ ದೇಣಿಗೆ ಸಂಗ್ರಹಿಸಿ ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಕೋಶಾಧಿಕಾರಿ ಆನಂದ ಗೌಡ ಪಡ್ಪು, ಪದಾಧಿಕಾರಿಗಳಾದ ಜಗದೀಶ್ ರೈ ತಂಬಿನಮಕ್ಕಿ, ಗಂಗಾಧರ ಮಾಸ್ತರ್ ಪರ್ತಿಕೆರೆ ಮತ್ತಿತರರು ದೇಣಿಗೆ ಸ್ಬೀಕರಿಸಿದರು. ಸಂಗ್ರಹ ಕಾರ್ಯದಲ್ಲಿ ಮೂಲೆಮಜಲು ದೋಳ ಗರಡಿಯ ಆಡಳ್ತೆದಾರರಾದ ಕೃಷ್ಣಪ್ಪ ಪೂಜಾರಿ, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಶಿಕ್ಷಕ ಲೋಕೇಶ್ ಬೆಳ್ಳಿಗೆ ಕೊಲೆಂಜಿಕೋಡಿ, ವಿಶ್ವನಾಥ ಜೋಗಿಬೆಟ್ಟು, ಜನಾರ್ಧನ ಕೊಳೆಂಜಿಕೋಡಿ, ಸಂಜೀವ ಬದಿವನ, ಸಾಯಿಪ್ರಸಾದ್ ಕಾಯಾರ ದೊಡ್ಡಮನೆ, ರಾಧಾಕೃಷ್ಣ ಕೊಳೆಂಜಿಕೋಡಿ, ಬಾಳಿಲ ಗ್ರಾ.ಪಂ. ಸದಸ್ಯ ಹರ್ಷ ಜೋಗಿಬೆಟ್ಟು, ಕೇಶವ ಕೊಳೆಂಜಿಕೋಡಿ ಮತ್ತಿತರರಿದ್ದರು.