ಮಡಪ್ಪಾಡಿ : ಕಡ್ಯ ಬಳಿ ತೋಟಕ್ಕೆ ಕಾಡಾನೆ ನುಗ್ಗಿ ಕೃಷಿ ನಾಶ

0

ಮಡಪ್ಪಾಡಿ ಗ್ರಾಮದ ಕಡ್ಯ ಯತೀಶ್ ಎಂಬವರ ತೋಟಕ್ಕೆ‌ ನಿನ್ನೆ ರಾತ್ರಿ ಕಾಡಾನೆ ನುಗ್ಗಿ ಕೃಷಿ ನಾಶ ಮಾಡಿರುವ ಘಟನೆ ವರದಿಯಾಗಿದೆ‌.

ತೋಟಕ್ಕೆ‌ ದಾಳಿ ಮಾಡಿರುವ ಕಾಡಾನೆ 2 ತೆಂಗಿನ ಮರ, 50 ಬಾಳೆ ಹಾಗೂ ಅಡಿಕೆ ಸಸಿಗಳನ್ನು ನಾಶ ಮಾಡಿದೆ ಎಂದು ತಿಳಿದು ಬಂದಿದೆ. ಈ‌ ಭಾಗದಲ್ಲಿ ಕಾಡಾನೆ ದಾಳಿ ಕಳೆದ ಕೆಲ ಸಮಯಗಳಿಂದ ನಿರಂತರವಾಗಿದ್ದು, ಕೃಷಿಕರಿಗೆ ಅಪಾರ ನಷ್ಟ ಸಂಭವಿಸುತ್ತಲೇ ಇದೆ. ಒಂದು ಕಡೆ ಹಳದಿ ರೋಗ, ಇನ್ನೂಂದು ಕಡೆ ಕಾಡು ಪ್ರಾಣಿಗಳ ಉಪಟಳದಿಂದ ಈ ಭಾಗದ ಕೃಷಿಕರು ಇನ್ನಷ್ಟು ಸಂಕಷ್ಟಕ್ಕೀಡಾಗಿದ್ದಾರೆ.