ಮಿತ್ರ ಬಳಗ ಎಲಿಮಲೆ ಇದರ ಮಹಾಸಭೆ-ನೂತನ ಸಮಿತಿ ರಚನೆ

0

ನೂತನ ಅಧ್ಯಕ್ಷ : ಜಯಂತ ಹರ್ಲಡ್ಕ

ಕಾರ್ಯದರ್ಶಿ : ಪ್ರಶಾಂತ್ ಅಂಬೆಕಲ್ಲು

ಮಿತ್ರ ಬಳಗ ಎಲಿಮಲೆಯ ಮಹಾಸಭೆಯು ಜು.21(ಇಂದು) ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ‌ ನಡೆಯಿತು.

ಬಳಗದ ಅಧ್ಯಕ್ಷ ಉದಯ ಚಳ್ಳ ಅಧ್ಯಕ್ಷತೆ ವಹಿಸಿದ್ದರು.

ಕುಲದೀಪ್ ಹರ್ಲಡ್ಕ ವಾರ್ಷಿಕ ವರದಿ ಮಂಡಿಸಿದರು.

ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಜಯಂತ ಅಂಬೆಕಲ್ಲು, ಕಾರ್ಯದರ್ಶಿ ಯಾಗಿ ಪ್ರಶಾಂತ್ ಅಂಬೆಕಲ್ಲು, ಕೋಶಾಧಿಕಾರಿಯಾಗಿ ಕುಲದೀಪ್ ಹರ್ಲಡ್ಕ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಉದಯ ಕುಮಾರ್ ಚಳ್ಳ, ಉಪಾಧ್ಯಕ್ಷರಾಗಿ ನಾಗೇಶ್ ತಳೂರು, ಮಣಿಕಂಠ ಎಲಿಮಲೆ, ಪ್ರಸನ್ನ ಎಸ್.ಎನ್., ದೀಕ್ಷಿತ್ ಚಿತ್ತಡ್ಕ, ಜತೆ ಕಾರ್ಯದರ್ಶಿ ಯಾಗಿ ತೀರ್ಥೇಶ್ ಗುಡ್ಡೆಮನೆ, ಕ್ರೀಡಾ ಕಾರ್ಯದರ್ಶಿಯಾಗಿ ಶೃಜೇಶ್ ಕಲ್ಲುಪಣೆ, ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಮಿಥುನ್ ಕೇಪಳಕಜೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಚಳ್ಳ, ಪ್ರಚಾರ ಕಾರ್ಯದರ್ಶಿಯಾಗಿ ಜಯಂತ್ ಸುಳ್ಳಿ ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜೀವನ್ ಕಲ್ಲುಪಣೆ, ಕೃತಿಕ್ ಕೇಪಳಕಜೆ, ಯಕ್ಷಿತ್ ಚಳ್ಳ, ರವಿಕಿರಣ್ ಕೇಪಳಕಜೆ, ತನುಷ್ ಬಾದ್ರಮನೆ, ಗೌತಮ್ ಕೇಪಳಕಜೆ, ವಿಕ್ರಾಂತ್ ಚಳ್ಳ, ರಾಜೇಶ್ ಎಲಿಮಲೆ, ಪ್ರದೀಪ್ ಹೊಟ್ಟುಚೋಡಿ ಇವರುಗಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಬಳಗದ ಗೌರವ ಸಲಹೆಗಾರರಾದ ಎ.ವಿ.ತೀರ್ಥರಾಮ, ಹಾಗೂ ಕೃಷ್ಣಯ್ಯ ಮೂಲೆತೋಟ ನೂತನ ಸಮಿತಿಗೆ ಶುಭ ಹಾರೈಸಿದರು.

ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಹರಿಪ್ರಸಾದ್ ಎಲಿಮಲೆ, ಕಿರಣ್ ಗುಡ್ಡೆಮನೆ, ಸತೀಶ್ ಗುಡ್ಡನಮನೆ, ಗಂಗಾಧರ, ತಾರನಾಥ್ ಅಡಿಗ, ಸುನಿಲ್ ಸುಳ್ಳಿ, ಪ್ರಕಾಶ್ ಕಜೆ ಉಪಸ್ಥಿತರಿದ್ದರು.

ಕುಲದೀಪ್ ಹರ್ಲಡ್ಕ ಸ್ವಾಗತಿಸಿ, ಪ್ರಶಾಂತ್ ಅಂಬೆಕಲ್ಲು ವಂದಿಸಿದರು.