ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ

0

ನೂತನ ಬೈಲುವಾರು ಸಮಿತಿ ಹಾಗೂ ಮಹಿಳಾ ಸಮಿತಿಗಳ ರಚನೆ

ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ ಮತ್ತು ನೂತನ ಬೈಲುವಾರು ಸಮಿತಿ ಹಾಗೂ ಮಹಿಳಾ ಸಮಿತಿಗಳ ರಚನೆ ಜು. 21 ರಂದು ಕೇರ್ಪಳ ಸಂಧ್ಯಾರಶ್ಮಿ ಸಭಾಭಾವನದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷ ಚಂದ್ರಶೇಖರ ಪನ್ನೆ, ಕಾರ್ಯದರ್ಶಿ ಸಚಿತ್ ಕಲ್ಮಡ್ಕ, ಖಜಾಂಚಿ ವಿಜಯ್‌ಕುಮಾರ್ ಎರ್ಮೆಟ್ಟಿಯವರಿಗೆ ಹಿಂದಿನ ಪದಾಧಿಕಾರಿಗಳು ಅಧಿಕಾರ ಹಸ್ತಾಂತರಿಸಿ, ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು.
ನೂತನ ಅಧ್ಯಕ್ಷ ಚಂದ್ರಶೇಖರ ಪನ್ನೆ ಆಡಳಿತ ಸಮಿತಿಯ ಜವಾಬ್ದಾರಿ ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ೨೦೨೪-೨೫ನೇ ಸಾಲಿನ ಬೈಲುವಾರು ಸಮಿತಿ ಸಂಚಾಲಕರಾಗಿ ಉದಯರವಿ ಕಲ್ಚಾರ್ ಹಾಗೂ ಸಹಸಂಚಾಲಕರಾಗಿ ನಿತೀಶ್ ಎರ್ಮೆಟ್ಟಿ ಆಯ್ಕೆಯಾದರು. ಮಹಿಳಾ ಸಮಿತಿ ಸಂಚಾಲಕರಾಗಿ ಹೇಮಲತಾ ಕಲ್ಲುಗುಂಡಿ ಹಾಗೂ ಸಹ ಸಂಚಾಲಕರಾಗಿ ಅನುರಾಧ ಜಾಲ್ಸೂರು ಆಯ್ಕೆಯಾದರು.ವೇದಿಕೆಯಲ್ಲಿ ಸಂಘದ ಪೂರ್ವಾಧ್ಯಕ್ಷರುಗಳಾದ ಶಂಕರ ಮಾಸ್ಟರ್ ಪರಿವಾರಕಾನ, ನಾರಾಯಣ ಪಾಟಾಳಿ ನಾವೂರು, ಮಹಾಲಿಂಗನ್ ಬಾಜರ್ತೊಟ್ಟಿ, ಚಂದ ಕುಡೆಕಲ್ಲು, ಸುರೇಶ್ ಕರ್ಲಪ್ಪಾಡಿ, ಸಂಘದ ಕಾರ್ಯದರ್ಶಿ ಸಚಿತ್ ಕಲ್ಮಡ್ಕ, ಖಜಾಂಜಿ ವಿಜಯ್ ಕುಮಾರ್ ಎರ್ಮೆಟ್ಟಿ, ಉಪಸ್ಥಿತರಿದ್ದರು.

ಸೌಮ್ಯ ಇರಂತಮಜಲು ಸ್ವಾಗತಿಸಿ, ಸಚಿತ್ ಕಲ್ಮಡ್ಕ ವಂದಿಸಿದರು. ಪ್ರವೀಣ್ ಜಯನಗರ ಕಾರ್ಯಕ್ರಮ ನಿರೂಪಿಸಿದರು.