ಬೊಳುಬೈಲು : ಕಿಡಿಗೇಡಿಗಳಿಂದ ಬೊಮ್ಮೆಟ್ಟಿ ನೀರಿನ ಛೇಂಬರ್ ಧ್ವಂಸ

0

ಜಾಲ್ಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಳುಬೈಲು ಎರಡನೇ ವಾರ್ಡಿನ
ಬೊಮ್ಮೆಟ್ಟಿ ಎಂಬಲ್ಲಿ ಕುಡಿಯುವ ನೀರಿನ ಛೇಂಬರನ್ನು ಕಿಡಿಕೇಡಿಗಳು ಧ್ವಂಸ ಗೊಳಿಸಿರುವ ಘಟನೆ ಜು 25 ರಂದು ರಾತ್ರಿ ನಡೆದಿದೆ.

ರಾತ್ರಿ ವೇಳೆ ಟ್ಯಾಂಕಿಗೆ ನೀರು ಬರುತ್ತಿಲ್ಲವೆಂದು ವಾಟರ್ ಮ್ಯಾನ್ ಗುರುನಾಥ ಪೈಚಾರ್ ರವರು ಗ್ರಾಮ ಪಂಚಾಯತಿ ಸದಸ್ಯರಾದ ಮುಜೀಬ್ ಪೈಚಾರ್
ಇವರಿಗ ತಿಳಿಸಿದ್ದು
ಮುಜೀಬ್ ರವರು ಪಂಪ್ ಬಳಿ ಹೋಗಿ ನೋಡಿದಾಗ ನೀರಿನ ಛೇಂಬರನ್ನು ಯಾರೋ ಒಡೆದು ಧ್ವಂಸ ಮಾಡಿ ಹಾಕಿರುವುದು ಕಂಡು ಬಂದಿದೆ.ತಕ್ಷಣ ಅವರು
ಪಂಚಾಯತಿ ಸಿಬ್ಬಂದಿ ಹಾಗೂ ಪಂಪ್ ಚಾಲಕ ಅತ್ಮರಾಮ ರವರಿಗೆ ಘಟನೆನೆಯ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.