ಉಬರಡ್ಕ ಮಿತ್ತೂರು :ಭರ್ಜರಿಗುಂಡಿಯಲ್ಲಿ ಕಾರಿನ ಮೇಲೆ ಮಗುಚಿ‌ ಬಿದ್ದ ತೆಂಗಿನ ಮರ

0

ಉಬರಡ್ಕ ಮಿತ್ತೂರು ಗ್ರಾಮದ ಭರ್ಜರಿಗುಂಡಿ ವಿಜಯ ರಾವ್ ರವರ ಮನೆಯ ಪಕ್ಕದಲ್ಲಿದ್ದ ತೆಂಗಿನ ಮರವೊಂದು ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದು ಕಾರು ಜಖಂ ಗೊಂಡ ಹಾಗೂ ಮನೆಗೂ ಹಾನಿಯಾಗಿರುವುದಾಗಿ ವರದಿಯಾಗಿದೆ.

ಜು.25ರಂದು ರಾತ್ರಿ ವೇಳೆ ಗಾಳಿ ಮಳೆ ಸಂದರ್ಭ ವಿಜಯ ರಾವ್ ರವರ ಮನೆಯ ಸಮೀಪವಿದ್ದ ದೊಡ್ಡ ಗಾತ್ರದ ಹಾಳೆ‌ ಮರವೊಂದು ಮುರಿದು, ಅದರ ಪಕ್ಕದಲ್ಲಿದ್ದ ತೆಂಗಿನ ಮರದ ಮೇಲೆ ಬಿತ್ತು. ತೆಂಗಿನ ಮರವು ಮಗುಚಿ ಅಂಗಳದಲ್ಲಿ ನಿಲ್ಲಿಸಿದ್ದ ಮಾರುತಿ ಆಲ್ಟೊ ಕಾರಿನ ಮೇಲೆ ಬಿತ್ತೆನ್ನಲಾಗಿದೆ. ತೆಂಗಿನ ಮರ ಮನೆಯ ಮಹಡಿಗೂ ತಾಗಿದೆ. ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಎರಡು ಬೈಕ್ ಕೂಡಾ ಅಂಗಳದಲ್ಲಿತ್ತೆಂದೂ ಅದಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.