ಆಲೆಟ್ಟಿ ಪ್ರಾ.ಕೃ.ಪ.ಸಹಕಾರಿ ಸಂಘದ ನಿವೃತ್ತ ಸಿ.ಇ.ಒ ರಾಮಣ್ಣ ಗೌಡ ಕುಂಚಡ್ಕ ರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ

0

ಆಲೆಟ್ಟಿ ಗ್ರಾಮದ ಕುಂಚಡ್ಕ ಮನೆತನದ ಹಾಗೂ ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಸಿ.ಇ.ಒ ರಾಮಣ್ಣ ಗೌಡ ಕುಂಚಡ್ಕ ರವರು ಜು.13 ರಂದು ನಿಧನರಾಗಿದ್ದು ಮೃತರ ವೈಕುಂಠ ಸಮಾರಾಧನೆಯು ಅಮರಶ್ರೀಭಾಗ್ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ಜು.28 ರಂದು ನಡೆಯಿತು.

ಮೃತರ ಜೀವನಗಾಥೆಯ ಕುರಿತು ಲೋಲಜಾಕ್ಷ ಭೂತಕಲ್ಲು ಮಾತನಾಡಿದರು.
ಆಲೆಟ್ಟಿ ಸೊಸೈಟಿ ನಿವೃತ್ತ ಸಿ.ಇ.ಒ ಸುಧಾಮ ಆಲೆಟ್ಟಿ ನುಡಿ ನಮನ ಸಲ್ಲಿಸಿದರು. ಧನಂಜಯ ಕುಂಚಡ್ಕ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಮೃತರ
ಪತ್ನಿ ಶ್ರೀಮತಿ ಚಂದ್ರಾವತಿ, ಪುತ್ರ ಶಿವಪ್ರಸಾದ್ ಕುಂಚಡ್ಕ , ಪುತ್ರಿ ಮಹಾಲಕ್ಷ್ಮಿ , ಸಹೋದರ ದೊಡ್ಡಯ್ಯ ಗೌಡ ಕುಂಚಡ್ಕ, ಸಹೋದರಿ ಶ್ರೀಮತಿ ವೇದಾವತಿ ಬಾಲಕೃಷ್ಣ ಗೌಡ ಬೆಳ್ಳೂರು ಹಾಗೂ ಕುಟುಂಬಸ್ಥರು ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ‌ ಸಮರ್ಪಿಸಿ ಶ್ರದ್ಧಾಂಜಲಿ ಕೋರಿದರು.