*ದೇವರಕೊಲ್ಲಿ: ಸ್ಕೂಟಿ – ಕಾರು ಅಪಘಾತ*

0

ಸಂಪಾಜೆಯ ಸ್ಕೂಟಿ ಸವಾರರಿಬ್ಬರಿಗೆ ಗಾಯ

ಸ್ಕೂಟಿ  ಮತ್ತು ಕಾರು ಅಪಘಾತ ಸಂಭವಿಸಿ, ಸ್ಕೂಟಿ ಸವಾರರಿಬ್ಬರು ಗಾಯಗೊಂಡ ಘಟನೆ ಮದೆ ಗ್ರಾಮದ ದೇವರಕೊಲ್ಲಿಯಲ್ಲಿ ಅ.11ರಂದು ರಾತ್ರಿ ಸಂಭವಿಸಿದೆ.

ಸಂಪಾಜೆಯ ರೋಹಿತ್ ನೂಜಿ ಹಾಗೂ ಒದಯಕುಮಾರ್  ಎಂಬವರು  ಮಡಿಕೇರಿಯಿಂದ ಸಂಪಾಜೆ ಕಡೆಗೆ ಸ್ಕೂಟಿಯಲ್ಲಿ ಬರುತ್ತಿದ್ದ  ಸಂದರ್ಭದಲ್ಲಿ  ಸುಳ್ಯದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕಾರಿಗೆ ಸ್ಕೂಟಿ ಢಿಕ್ಕಿ ಹೊಡೆದಿದ್ದು , ಸ್ಕೂಟಿ ಸವಾರರಾದ ರೋಹಿತ್ ನೂಜಿ  ಮತ್ತು ಒದಯಕುಮಾರ್  ಅವರಿಗೆ ಗಾಯವಾಗಿದ್ದು, ಸ್ಥಳೀಯರು ಸೇರಿ ಅವರನ್ನು ಕೊಡಗು ಸಂಪಾಜೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿರುವುದಾಗಿ ತಿಳಿದುಬಂದಿದೆ.