ಮಡಿಕೇರಿ ದಸರಾಕ್ಕೆ ಆಗಮಿಸಿದ್ದ ಡಿಸಿಎಂ ಶಿವಕುಮಾರ್ ರನ್ನು ಭೇಟಿಯಾದ ಸುಳ್ಯದ ಕಾಂಗ್ರೆಸ್ ನಾಯಕರು

0

ಮಡಿಕೇರಿ ದಸರಾ ಕಾರ್ಯಕ್ರಮಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿಗಳು ಹಾಗು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮರ್ ಅವರನ್ನು ಸುಳ್ಯದ ಕಾಂಗ್ರೆಸ್ ನಾಯಕರು ಮಡಿಕೇರಿಯಲ್ಲಿ ಭೇಟಿಯಾಗಿ ದಸರಾ ಹಬ್ಬದ ಶುಭಾಷಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಮತ್ತು ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಶಾಸಕರಾದ ಎ ಎಸ್ ಪೊನ್ನಣ್ಣ, ಮಂತರ್ ಗೌಡ, ಕಾಂಗ್ರೆಸ್ ಮುಖಂಡರಾದ ನಂದಕುಮಾರ್, ರಾಧಾಕೃಷ್ಣ ಬೊಳ್ಳೂರು, ಸಿದ್ದಿಕ್ ಕೊಕ್ಕೊ, ಶಶಿಧರ್ ಎಂ ಜೆ ಭಾವನಿಶಂಕರ ಕಲ್ಮಡ್ಕ ಮತ್ತು ಚೇತನ್ ಕಜೆಗದ್ದೆ ಮತ್ತಿತರು ಉಪಸ್ಥಿತರಿದ್ದರು.