ಗಟ್ಟಿಗಾರು ಶಾಲೆಯ ಶಿಥಿಲಗೊಂಡ ಛಾವಣಿ ವೀಕ್ಷಿಸಿದ ಶಾಸಕಿ ಭಾಗೀರಥಿ

0

ಗಟ್ಟಿಗಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಛಾವಣಿ ಶಿಥಿಲಗೊಂಡು‌ ಬೀಳುವ ಹಂತಕ್ಕೆ ತಲುಪಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು| ಭಾಗೀರಥಿ ಮುರುಳ್ಯ ಇಂದು ಶಾಲೆಗೆ ಭೇಟಿ ನೀಡಿ ಚಾವಣಿ ವೀಕ್ಷಿಸಿ ಶೀಘ್ರವಾಗಿ ಹೊಸ ಛಾವಣಿ ನಿರ್ಮಾಣದ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಗಟ್ಟಿಗಾರು ಶಾಲಾ ಎಸ್.ಡಿ.ಎಂ.ಸಿ.‌ ಅಧ್ಯಕ್ಷ ಹರಿಪ್ರಸಾದ್ ಅಡಿಗದ್ದೆ, ಎಲಿಮಲೆ ಮಿತ್ರ ಬಳಗದ ಅಧ್ಯಕ್ಷ ಜಯಂತ ಹರ್ಲಡ್ಕ, ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಈಶ್ವರಪ್ಲ ಹರ್ಲಡ್ಕ, ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಸದಸ್ಯ ವೇಣುಗೋಪಾಲ ತುಂಬೆತ್ತಡ್ಕ, ಹಾಗೂ ಪ್ರಮುಖರಾದ ಹರಿಪ್ರಸಾದ್ ಬಿ.ವಿ., ಸತೀಶ್ ಗುಡ್ಡನಮನೆ, ಗಂಗಾಧರ ಮಂದ್ರಪ್ಪಾಡಿ, ಹರಿಪ್ರಸಾದ್ ಮಂದ್ರಪ್ಪಾಡಿ, ಕುಲದೀಪ್ ಹರ್ಲಡ್ಕ, ಅಚ್ಯುತ ಮುಂಡೋಕಜೆ ಜತೆಗಿದ್ದರು.