ಜಯನಗರ ಶಾಲಾ ವಿದ್ಯಾರ್ಥಿಗಳಿಗೆ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮವಸ್ತ್ರ ವಿತರಣೆ

0

ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಜಯನಗರ ಸ ಉ ಹಿ ಪ್ರಾ ಶಾಲೆಯ ಸುಮಾರು 70 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಜು. 29 ರಂದು ನಡೆಯಿತು.31.500 ವೆಚ್ಚದಲ್ಲಿ ಶಾಲಾ ಸಮವಸ್ತ್ರ
ವಿತರಣೆ.
ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಸುಳ್ಯದಲ್ಲಿ ಅನೇಕ ಸರಕಾರಿ ಶಾಲೆಗಳಿಗೆ, ಬಡ ಕುಟುಂಬ ಗಳಿಗೆ, ಬಡ ರೋಗಿಗಳಿಗೆ ನಾನಾ ರೀತಿಯಲ್ಲಿ ಸಹಾಯ ಹಸ್ತ ಚಾಚಿದ ಸಂಸ್ಥೆಯಾಗಿ ಸುಳ್ಯ ತಾಲೂಕಿನಾದ್ಯಂತ ಗುರುತಿಸಿ ಕ್ಕೊಂಡಿದೆ.

ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಮತ್ತು ಸುಳ್ಯ ನ. ಪಂ ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕಿರಿ ಮತ್ತು ಅವರ ಪುತ್ರ ಹಾಗೂ ಟ್ರಸ್ಟ್ ನ ಸದಸ್ಯರಾದ ಸಂತೋಷ್ ಕೊಡೆಂಕಿರಿಯವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿದರು.
ಈ ಸಂಧರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಕೆ, ಹಾಗೂ ಅಧ್ಯಾಪಕ ವೃಂದದವರು ಎಸ್ ಡಿ ಎಂ ಸಿ ಅಧ್ಯಕ್ಷ ಮುದ್ದಪ್ಪ,ಉಪಾಧ್ಯಕ್ಷರು ನಳಿನಿ ಹಾಗೂ ಸದಸ್ಯರು,ವಿದ್ಯಾರ್ಥಿಗಳ ಪೋಷಕರು ಪೋಷಕರು ಉಪಸ್ಥಿತರಿದ್ದರು.