ರಣಭೀಕರ ಮಳೆ ಪುಣ್ಚತ್ತಾರು ಬ್ಲಾಕ್ : ಪುತ್ತೂರು – ನಿಂತಿಕಲ್ಲು ಸಂಚಾರ ಬಂದ್

0

ಇಂದು ಬೆಳಿಗ್ಗೆಯಿಂದ ಸುರಿದ ರಣಭೀಕರ ಮಳೆಗೆ ಕಾಣಿಯೂರು ಸಮೀಪದ ಪುಣ್ಚತ್ತಾರು ಬಳಿ ನದಿ ನೀರು ರಸ್ತೆಗೆ ಬಂದು ರಸ್ತೆ ಬಂದ್ ಆದ ಘಟನೆ ಮಧ್ಯಾಹ್ನ ನಂತರ ನಡೆದಿದೆ.


ಪುಣ್ಚತ್ತಾರು ಬಂದ್ ಆದ ಹಿನ್ನೆಲೆಯಲ್ಲಿ ಪುತ್ತೂರು – ನಿಂತಿಕಲ್ಲು ಸಂಪರ್ಕದ ಕಡಿತಗೊಂಡಿದೆ‌. ಪುತ್ತೂರಿನಿಂದ ನಿಂತಿಕಲ್ಲು ಪಂಜ ಕಡೆಗೆ ಪ್ರಯಾಣಿಸುವವರು ಸವಣೂರು ಬೆಳ್ಳಾರೆ ಅಥವಾ ಮಾಡಾವು ಬೆಳ್ಳಾರೆಯಾಗಿ ನಿಂತಿಕಲ್ಲು ಪಂಜ ಭಾಗಕ್ಕೆ ಹೋಗಬಹುದಾಗಿದೆ.