ಪಂಜ:ಭಾರೀ ಮಳೆಗೆ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆ

0

ಎರಡು ದಿನಗಳಿಂದ ಬೊಳ್ಮಲೆ-ಬಸ್ತಿಕಾಡು ರಸ್ತೆ ಸಂಪರ್ಕವೇ ಇಲ್ಲ!

ಭಾರೀ ಮಳೆಯಿಂದಾಗಿ ಪಂಜ ಹೊಳೆ ನೀರಿನ ಮಟ್ಟ ಬಹಳ ಏರಿಕೆಯಾಗಿರುವುದರಿಂದ ಬೊಳ್ಮಲೆಯಲ್ಲಿ ಕಿಂಡಿ ಅಣೆಕಟ್ಟು ಎರಡು ದಿನಗಳಿಂದ ಸಂಪೂರ್ಣ ಮುಳುಗಡೆ ಗೊಂಡಿದ್ದು ಇನ್ನೂ ನೀರು ಇಳಿದಿಲ್ಲ.

ಕಿಂಡಿ ಅಣೆಕಟ್ಟು ಮೇಲೆ ಬಸ್ತಿಕಾಡು ಅನೇಕ ಮನೆಗಳಿಗೆ ಸಂಪರ್ಕಿಸುವ ರಸ್ತೆಯಿದ್ದು ಆ ಭಾಗದ ಜನರು ಕಳೆದ ಎರಡು ದಿನಗಳಿಂದ ಕಷ್ಟ ಪಡುವಂತಾಗಿದೆ.
ಆ ಭಾಗಕ್ಕೆ ವಾಹನ ಸಂಚಾರಕ್ಕೆ ಏಕೈಕ ರಸ್ತೆ ಇದಾಗಿದ್ದು. ಹೊಳೆಯಂದೀಚೆಗೆ‌ ಬರಲು ಬಹಳಷ್ಟು ಸುತ್ತುವರಿದ ಖಾಸಗಿಯವರ ಜಾಗದಲ್ಲಿ ಕಾಲು ದಾರಿ ಮಾತ್ರವಿದೆ.