ಕಲ್ಲುಗುಂಡಿ : ಎಸ್ .ಪಿ. ಕುಟುಂಬಗಳ ಸಂಭ್ರಮದ “ಆಟಿ ಕೂಟ”

0

ದ.ಕ. ಸಂಪಾಜೆ ಗ್ರಾಮದ ಎಸ್. ಪಿ ಕೂಸಪ್ಪ ಗೌಡ ಮತ್ತು ಸೋಮಾವತಿ ದಂಪತಿಗಳ ಕುಟುಂಬದಿಂದ ಆಯೋಜಿಸಿದ್ದ ಸಂಭ್ರಮದ ಆಟಿಕೂಟವು ಎಸ್ . ಪಿ ಲೋಕನಾಥ್ ಹಾಗೂ ಶ್ರೀಮತಿ ಯಶೋಧ ದಂಪತಿಗಳ ನಿವಾಸದಲ್ಲಿ ಜು. 28 ರಂದು ನಡೆಯಿತು.

ಕಾರ್ಯಕ್ರಮವನ್ನು ಎಸ್. ಪಿ. ಕೂಸಪ್ಪ ಗೌಡ ಅವರ ಮಕ್ಕಳಾದ ಪುಷ್ಪಾವತಿ ಮಾಣಿಬೆಟ್ಟು, ನಳಿನಿ ಸೂರಯ್ಯ ಸೂಂತೋಡು, ದಯಾಮಣಿ ರಾಮದಾಸ್ ಅವರು ಜಂಟಿಯಾಗಿ ದೀಪ ಬೆಳಗಿಸಿ, ಉದ್ಘಾಟಿಸಿದರು.

ಬಳಿಕ ಹಿಂದಿನ ಕಾಲದ ಆಟಿ ಉತ್ಸವದ ಸವಿ ನೆನಪುಗಳನ್ನು ಮೆಲುಕು ಹಾಕಲಾಯಿತು.


ಕಾರ್ಯಕ್ರಮದಲ್ಲಿ ಸುಮಾರು ಮೂವತ್ತು ಬಗೆಯ ವಿವಿಧ ಆಟಿ ತಿನಿಸುಗಳು ಇದ್ದವು.

ಈ ಸಂದರ್ಭದಲ್ಲಿ ಮಕ್ಕಳಿಗೆ , ದಂಪತಿಗಳಿಗೆ, ಹಿರಿಯ ದಂಪತಿಗಳಿಗೆ ರಸಪ್ರಶ್ನೆ, ಹಾಡು , ವಿವಿಧ ಮನೋರಂಜನಾ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.

ಎಸ್. ಪಿ ಕುಟುಂಬದ ರಾಧಾಕೃಷ್ಣ ಮಾಣಿಬೆಟ್ಟು, ಸೂರಯ್ಯ ಸೂಂತೋಡು, ರಾಮದಾಸ್ ಪುತ್ತೂರು, ಅಂಬೆಕಲ್ಲು ನವೀನ, ಸೋಮಸುಂದರ ಕೂಜುಗೋಡು, ದಯಾಪ್ರಸಾದ್ ಮುಳ್ಳು, ಸುಹಾನ್ ಮುಳ್ಳು, ಸನತ್, ಶಿಲ್ಪಾ ಸನತ್, ಯಶೋಧಾ ನಿರ್ಮಲಚಂದ್ರ, ಮೋಹನ, ಸುಶೀಲಾ ಎಸ್. ಪಿ., ಮುರಳೀಧರ ಕೆಮ್ಮಾರ, ರೇಷ್ಮಾ ಕರುಣಾಕರ ಪೆಲ್ತಡ್ಕ, ವಸಂತ ಅರಂಬೂರು ,ರವಿರಾಜ್ ಹೊಸೂರು, ಸಂಗೀತಾ ರವಿರಾಜ್ ಹೊಸೂರು, ರವಿ ಪ್ರಸಾದ್ ಮಾಣಿಬೆಟ್ಟು,ಪ್ರಿಯಾ ನವೀನ್ ಅಂಬೆಕಲ್ಲು, ಯೋಗೀಶ ಭಾರತಿ ಪೆಲ್ತಡ್ಕ, ತನುಷ್ ಪಿ. ಕೆ, ಮಂಜು ನಾಥ ಕೈಕುರೆ, ರಜನಿ ಮಿಥುನ್ ಕೂಜುಕೂಜುಗೋಡು,ಕುಶಾಲಪ್ಪ ಗೌಡ ಸೇರಿದಂತೆ ಎಸ್.ಪಿ. ಕುಟುಂಬಸ್ಥರು ಉಪಸ್ಥಿತರಿದ್ದರು.