ದುಗ್ಗಲಡ್ಕ; ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟದ ವಾರ್ಷಿಕ ಮಹಾಸಭೆ- ಸನ್ಮಾನ

0

ದುಗ್ಗಲಡ್ಕದ ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ವಾರ್ಷಿಕ ಮಹಾಸಭೆ ಆ.4 ರಂದು ಸಂಜೆ ಯುವಕ ಮಂಡಲದ ಕಟ್ಟಡದಲ್ಲಿ ನಡೆಯಿತು.


ಜಂಟಿ ಸಂಘಗಳ ಸಂಚಾಲಕರಾದ ಕೆ.ಟಿ.ವಿಶ್ವನಾಥ, ಯುವಕ ಮಂಡಲದ ಅಧ್ಯಕ್ಷ ಚೇತನ್ ಕಲ್ಮಡ್ಕ, ಕುರಲ್ ತುಳುಕೂಟದ ಅಧ್ಯಕ್ಷ ನವ್ಯ ದಿನೇಶ್ ಕೊಯಿಕುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಮನೋಜ್ ಪಾನತ್ತಿಲ ಮತ್ತು ಪ್ರದೀಪ್ ಕೊಯಿಕುಳಿ ವರದಿ ವಾಚಿಸಿದರು.ಕೋಶಾಧಿಕಾರಿ ಚಿದಾನಂದ ಕೊಯಿಕುಳಿ ಲೆಕ್ಕಪತ್ರ ಮಂಡಿಸಿದರು. ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಈ ಸಂದರ್ಭದಲ್ಲಿ ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯರಾಗಿ ನೇಮಕಗೊಂಡ ಭಾಸ್ಕರ ಪೂಜಾರಿ ಬಾಜಿನಡ್ಕ, ದುಗ್ಗಲಡ್ಕ ಪ್ರೌಢಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಆಯ್ಕೆಯಾದ ನಾರಾಯಣ ಟೈಲರ್ ರವರನ್ನು ಸನ್ಮಾನಿಸಲಾಯಿತು.
ಯುವಕ ಮಂಡಲದ ಮಾಜಿ ಅಧ್ಯಕ್ಷ ಶಶಿಧರ ಎಂ.ಜೆ.ಶುಭ ಹಾರೈಸಿದರು.


ಕುರಲ್ ತುಳುಕೂಟದ ನೂತನ ಅಧ್ಯಕ್ಷ ರಮೇಶ್ ನೀರಬಿದಿರೆ, ಕಾರ್ಯದರ್ಶಿ ಕೆ.ಟಿ
ಭಾಗೀಶ್ ,ಕೋಶಾಧಿಕಾರಿ ಪ್ರಿಯಾ ಸದಾನಂದ, ಯುವಕ ಮಂಡಲದ ನೂತನ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ, ಕಾರ್ಯದರ್ಶಿ ಜಯಂತ್ ಕೊಯಿಕುಳಿ, ಕೋಶಾಧಿಕಾರಿ ಚಂದ್ರನ್ ಕೂಟೇಲು ರವರಿಗೆ ಅಧಿಕಾರ ಹಸ್ತಾಂತರ ನಡೆಯಿತು. ನ.ಪಂ.ಮಾಜಿ ಸದಸ್ಯ ಇಬ್ರಾಹಿಂ ನೀರಬಿದಿರೆ, ಯು.ಮಂ.ದ ಮಾಜಿ ಅಧ್ಯಕ್ಷರುಗಳಾದ ಧನಂಜಯ ಕಲ್ಮಡ್ಕ, ದಿನೇಶ್ ಕೊಯಿಕುಳಿ, ಸುರೇಶ್ ನಾಯಕ್,ವಾರಿಜ ಕೊರಗಪ್ಪ ಗೌಡ ಕೊಯಿಕುಳಿ ಮೊದಲಾದವರು ಉಪಸ್ಥಿತರಿದ್ದರು.
ನವ್ಯ ದಿನೇಶ್ ಕೊಯಿಕುಳಿ ಸ್ವಾಗತಿಸಿ, ಕೆ.ಟಿ.ಭಾಗೀಶ್ ವಂದಿಸಿದರು. ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.