ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಹಣ್ಣುಗಳ ಸೇವನೆ, ಪೋಷಣೆ ಬಗ್ಗೆ ಮಾಹಿತಿ ಕಾರ್ಯಕ್ರಮ

0

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ನಡೆದ ಸಪ್ತಾಹಿಕ ಸಭೆಯಲ್ಲಿ ಹಣ್ಣುಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಯಿತು. ಪಂಜ ಸಾನಿಕ ಫಾರಂ ಮಾಲಕ ಪಂಚಶ್ರೀ ಜಿಸಿಐನ ಪೂರ್ವ ಅಧ್ಯಕ್ಷ ದಯಾಪ್ರಸಾದ ಚಿಮುಳ್ಳುರವರು ವಿವಿಧ ಜಾತಿಯ ತಿನ್ನುವ ಹಣ್ಣುಗಳು, ಗಿಡಗಳನ್ನ ನೆಡುವ ಬಗ್ಗೆ ಫಲ ಕೊಡುವ ಬಗ್ಗೆ ಅದನ್ನ ಪೋಷಿಸುವ ಬೆಳೆಸುವ ಬಗ್ಗೆ ಸಚಿತ್ರವಾದ ಮಾಹಿತಿಗಳನ್ನು ನೀಡಿದರು.


ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ ನಾಯರ್ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜೊನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಕಾರ್ಯದರ್ಶಿ ಚಿದಾನಂದ ಕುಳ ಉಪಸ್ಥಿತರಿದ್ದರು. ಪೂರ್ವ ಅಧ್ಯಕ್ಷರುಗಳಾದ ಕಿಶೋರ್ ಕುಮಾರ್ ಕೂಜುಗೋಡು, ಶಿವರಾಮ ಎನೆಕಲ್, ರಾಮಕೃಷ್ಣ ಮಲ್ಲಾರ ,ಗಿರಿಧರ ಸ್ಕಂದ ,ಭರತ್ ನೆಕ್ರಾಜೆ ,ಗೋಪಾಲ್ ಎಣ್ಣೆ ಮಜಲ್, ಸದಸ್ಯರುಗಳಾದ ರವಿ ಕಕ್ಕೆಪದವು ,ದಿನೇಶ್ ಎಣ್ಣೆ ಮಜಲ್, ಭವಾನಿ ಶಂಕರ ಪೈಲಾಜೆ ಹಾಜರಿದ್ದು ವಿವಿಧ ಪ್ರಶ್ನೆಗಳೊಂದಿಗೆ ಮಾಹಿತಿದಾರರಿಂದ ಉತ್ತರಗಳನ್ನು ಪಡೆದರು. ಇದೇ ಸಂದರ್ಭದಲ್ಲಿ ತರಬೇತುದಾರ ದಯಪ್ರಸಾದ ಚೀಮುಳ್ಳು ಅವರನ್ನು ರೋಟರಿ ಕ್ಲಬ್ ವತಿಯಿಂದ ಗೌರವಿಸಲಾಯಿತು.