ನಿಂತಿಕಲ್ಲು : ಭರ್ಜರಿ ಮಳೆ-ಅಂಗಡಿಗಳಿಗೆ ನುಗ್ಗಿದ ನೀರು

0

ಇಂದು ಸಂಜೆ ಸುಮಾರು 7.30 ರ ವೇಳೆಗೆ ಭಾರೀ ಮಳೆ ಸುರಿದಿದ್ದು ನಿಂತಿಕಲ್ಲಿನ ಅಂಗಡಿಗೆ ನೀರು ನುಗ್ಗಿದ ಘಟನೆ ವರದಿಯಾಗಿದೆ

ಸುಳ್ಯ ತಾಲೂಕಿನದ್ಯಂತ ಇಂದು ಮಧ್ಯಾಹ್ನದವರೆಗೆ ಬಿಸಿಲು ಕಾದಿತ್ತು, ಆದರೆ ಸಂಜೆ ಹೊತ್ತಿಗೆ ಸುರಿದ ಗುಡುಗು ಸಹಿತ ಭಾರೀ ಮಳೆಗೆ ನಿಂತಿಕಲ್ಲಿ ನ ವನದುರ್ಗೆ ದೇವಾಲಯದ ಬಳಿ ಇರುವ ವರ್ಣಿ ಕಾಂಪ್ಲೆಕ್ಸ್ ನಲ್ಲಿರುವ ಅಂಗಡಿಗಳಿಗೆ ನೀರು ನುಗ್ಗಿ ಅವಾಂತರಗಳೇ ಸೃಷ್ಟಿಯಾಗಿವೆ.

ಕಾಂಪ್ಲೆಕ್ಸ್ ನ ಹಿಂಭಾಗವಿರುವ ಸಣ್ಣ ಹೊಳೆಯಲ್ಲಿ ನೀರು ಜಾಸ್ತಿಯಾಗುತ್ತಿದ್ದಂತೆ ನೀರು ಅಂಗಡಿಯ ಒಳ ನುಗ್ಗಿದೆ.

ಹೋಟೆಲ್ ನರಸಿಂಹ , ವಂದೇ ಬಜಾರ್ ಗಳಿಗೆ ನೀರು ನುಗ್ಗಿದ್ದು , ಸುಮಾರು ಬೆಳೆಬಾಳುವ ವಸ್ತುಗಳು ಹಾನಿಯಾಗಿದ್ದು ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.