ನಿಂತಿಕಲ್ಲು : ವರ್ತಕರಿಂದ ಸಂಭ್ರಮದ 78ನೇ ಸ್ವಾತಂತ್ರ್ಯ ದಿನಾಚರಣೆ

0

ನಿಂತಿಕಲ್ಲು ಪೇಟೆಯ ಎಲ್ಲಾ ಅಂಗಡಿಗಳ ಮಾಲಕರು ಮತ್ತು ಸಿಬ್ಬಂದಿ ವರ್ಗದವರಿಂದ ನಿಂತಿಕಲ್ಲು ಪೇಟೆಯ ಹೃದಯ ಭಾಗವಾದ ಧರ್ಮಶ್ರೀ ಆರ್ಕೇಡ್‌ನ ಎದುರುಗಡೆ 78ನೇ ವರ್ಷದ ಮತ್ತು ನಿಂತಿಕಲ್ಲು ಪೇಟೆಯಲ್ಲಿ 3ನೇ ವರ್ಷದ ಸ್ವಾತಂತ್ರ್ಯ. ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಮಾರಂಭದಲ್ಲಿ ಧ್ವಜರೋಹಣವನ್ನು ನಿವೃತ್ತ ಉಪನ್ಯಾಸಕರಾದ ಜಯರಾಜ ಆಚಾರ್ ಕಳತ್ತಾಜೆಯವರು ನೇರವೇರಿಸಿದರು.ಮುಖ್ಯ ಅಥಿತಿಗಳಾಗಿ ನಿವೃತ್ತ ಅಧ್ಯಾಪಕರಾಗಿರುವ ವೆಂಕಪ್ಪ ಗೌಡ ಆಲಾಜೆ ಮತ್ತು ನಿಂತಿಕಲ್ಲು ಪರಿಸರದ ಖ್ಯಾತ ವೈದ್ಯರಾದ ಡಾ|ಆಶಾಕೃಷ್ಣಮೂರ್ತಿ ಆಗಮಿಸಿ ಶುಭ ಹಾರೈಸಿದರು. ನಿಂತಿಕಲ್ಲು ಪೇಟೆಯ ಎಲ್ಲಾ ಅಂಗಡಿ ಬ್ಯಾಂಕ್ ಮತ್ತು ಕಚೇರಿಗಳ ಮಾಲಕ ಮತ್ತು ಸಿಬ್ಬಂದಿ ವರ್ಗದವರು ಆಟೋ ರಿಕ್ಷಾ ಚಾಲಕ ಮಾಲಕರು,ಪಿಕಪ್ ಚಾಲಕರು ಮತ್ತು ಮಾಲಕರು,ಎಲ್ಲಾ ಅಂಗಡಿಗಳ ಮಾಲಕ ಮತ್ತು ಸಿಬ್ಬಂದಿಗಳು ಹಾಗೂ ಆಸುಪಾಸಿನ ಎಲ್ಲಾ ಶಾಲೆಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೆ ಆದಿತ್ಯ ಎಲೆಕ್ಟಿಕಲ್ಸ್ ಮತ್ತು ಎಲೆಕ್ಟೋನಿಕ್ಸ್ ಮಾಲಕರಾದ

ದಯಾನಂದ ಕೆಬ್ಬೋಡಿ ಎಲ್ಲಾರನ್ನು ಸ್ವಾಗತಿಸಿದರು.ಡಿಂಪಲ್ ಡಿಜಿಟಲ್ ಮಾಲಕರಾದ ಎನ್.ಟಿ. ವಸಂತ್ ನಳಿಯಾರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಧರ್ಮಶ್ರೀ ಆರ್ಕೇಡ್ ಮಾಲಕರಾದ ಮಾಧವ ಗೌಡ ಕಾಮಧೇನು ವಂದಿಸಿದರು.

ಎಲ್ಲಾರಿಗೂ ಸಿಹಿತಿಂಡಿ ವಿತರಣೆ ಮಾಡಲಾಯಿತು.