ಕಾಂಞಂಗಾಡ್ -ಕಾಣಿಯೂರು ರೈಲ್ವೆ ಬ್ರಾಡ್ ಗೇಜ್ ಲೈನ್ ಶೀಘ್ರವಾಗಿ ಸರಿ ಪಡಿಸಿ ಕೊಡಲು ಸುಳ್ಯ ಶಾಸಕರಿಗೆ ಮನವಿ

0

ಮನವಿ ಸ್ವೀಕರಿಸಿ ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ನೀಡುವ ಭರವಸೆ ನೀಡಿದ ಶಾಸಕರು

ಬಹು ನಿರೀಕ್ಷಿತ ಕೇರಳದ ಕಾಂಞಂಗಾಡ್ ನಿಂದ ಕರ್ನಾಟಕದ ಕಾಣಿಯೂರು ಸಂಪರ್ಕಿಸುವ ರೈಲ್ವೆ ಬ್ರಾಡ್ ಗೇಜ್ ಲೈನಿನ ಕಾಮಗಾರಿ ಶೀಘ್ರ ಆರಂಭಿಸುವಂತೆ ಇದಕ್ಕೆ ಸಂಭಂದ ಪಟ್ಟ ಆಕ್ಷನ್ ಕಮಿಟಿ ಆ 15 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ರವರಿಗೆ ಮನವಿ ನೀಡಿ ವಿನಂತಿಸಿದ್ದಾರೆ.

ಮನವಿಯಲ್ಲಿ ಸದ್ರಿ ಕಾಮಗಾರಿಯ ಸರ್ವೆ ಕಾರ್ಯ ಪೂರ್ಣ ಗೊಂಡಿದ್ದು,ಕೆಲಸ ಕಾರ್ಯ ವನ್ನು ಶೀಘ್ರದಲ್ಲಿ ಅನುಷ್ಠಾನ ಗೊಳಿಸಲು ಕೇಂದ್ರ ಸರಕಾರದ ಗಮನಕ್ಕೆ ನೀಡಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ಪುನರ್ಜೀವಗೊಳಿಸುವಂತೆ ಉಲ್ಲೇಖಿಸಲಾಗಿದೆ.

ಮನವಿ ಸ್ವೀಕರಿಸಿರುವ ಶಾಸಕರು ಇದರ ಬಗ್ಗೆ ರೈಲ್ವೆ ಸಚಿವರಾದ ಸೋಮಣ್ಣರವರ ಗಮನಕ್ಕೆ ನೀಡಿ ನಮ್ಮ ಸಂಸದರಾದ ಕೇಪ್ಟನ್ ಬ್ರಿಜೇಶ್ ಚೌಟರವರ ನೇತ್ರತ್ವದಲ್ಲಿ ಅವರೊಂದಿಗೆ ಮಾತನಾಡುವ ಸಮಯ ನಿಗದಿಪಡಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಸದ್ರಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ ಬಿ ಸುಧಾಕರ್ ರೈ, ಮುಖಂಡರುಗಳಾದ ಎಸ್ ಎನ್ ಮನ್ಮಥ, ಮಹೇಶ್ ಕುಮಾರ್ ರೈ ಮೇನಾಲ,ಸುಳ್ಯ ಜೂನಿಯರ್ ಕಾಲೇಜ್ ಪ್ರಾಂಶುಪಾಲರಾದ ಮೋಹನ್ ಗೌಡ,ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ,ನಗರ ಪಂಚಾಯತ್ ಸದಸ್ಯ ಶಿಲ್ಪಾಸುದೇವ್,ಗುರುಸ್ವಾಮಿ
ಮತ್ತಿತರರು ಉಪಸ್ಥಿತರಿದ್ದರು.