ಬಾವುಟಗುಡ್ಡೆಯಲ್ಲಿ ಕೆದಂಬಾಡಿ ರಾಮಾಯ್ಯ ಗೌಡರ ಪ್ರತಿಮೆಯ ಮುಂಭಾಗದಲ್ಲಿ ಸ್ವಾತಂತ್ರ್ಯೋತ್ಸವ

0

ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ವಾತಂತ್ರ ಹೋರಾಟಗಾರ ಕೆದಂಬಾಡಿ ರಾಮಾಯ್ಯ ಗೌಡರ ಪ್ರತಿಮೆಯ ಮುಂಭಾಗದಲ್ಲಿ ಇಂದು ವಿಜ್ರಂಭಣೆಯಿಂದ ಧ್ವಜಾರೋಹಣ ಮಾಡಲಾಯಿತು.

ದ್ವಜಾರೋಹಣವನ್ನು ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷರಾದ ಲೋಕಯ್ಯ ಗೌಡರವರು ನೆರವೇರಿಸಿದರು.


ಮುಖ್ಯ ಅತಿಥಿಗಳಾಗಿ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಅವರು ಭಾಗವಹಿಸಿದ್ದರು. ಅತಿಥಿಗಳಾಗಿ ಡಿ.ಬಿ ಬಾಲಕೃಷ್ಣ, ಶ್ರೀಮತಿ ಪೂರ್ಣಿಮಾ ಕೆಎಂ , ಸುಂದರ್ ಗೌಡ, ಕೇಶವ ಗೌಡ, ಗುರುದೇವ ಯು.ಬಿ ,ಸದಾನಂದ ಡಿಪಿ ,ಆನಂದ ಪಿ.ಹೆಚ್ ,ಡಾ. ಸಚಿನ್ ನಡ್ಕ , ಕುಸುಮಾದರ, ಶ್ರೀಮತಿ ಸಾರಿಕಾ ಸುರೇಶ್, ನವೀನ್ ಚಿಲ್ಪಾರ್ , ರಾಮಚಂದ್ರ ಕೆ.,ವಾಸುದೇವ ವಕೀಲರು ಭಾಗವಹಿಸಿದ್ದರು. ಹಾಗೂ ಒಕ್ಕಲಿಗರ ಗೌಡ ಸೇವಾ ಸಂಘದ ಪದಾದಿಕಾರಿಗಳು , ನಿರ್ದೇಶಕರು, ಮಹಿಳಾ ಘಟಕದ ಹಾಗೂ ಯುವ ಘಟಕದ ಪದಾಧಿಕಾರಿಗಳು ನಿರ್ದೇಶಕರು ಮತ್ತು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ ಪದಾದಿಕಾರಿಗಳು, ನಿರ್ದೇಶಕರು ಭಾಗವಹಿಸಿದ್ದರು, ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಸ್ಥಾಪನ ಸಮಿತಿ ಪ್ರಧಾನ ಕಾರ್ಯದರ್ಶಿ, ರಕ್ಷಿತ್ ಪುತ್ತಿಲ ಸ್ವಾಗತಿಸಿದರು. ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಸ್ಥಾಪನ ಸಮಿತಿಯ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಪ್ರಸ್ತಾವಿಕವಾಗಿ ಮಾತನಾಡಿದರು. ಕಿರಣ್ ಹೊಸಳಿಕೆ ಧನ್ಯವಾದ ಸಲ್ಲಿಸಿದರು .

ಬಂಟ್ವಾಳ ಮೊನಪ್ಪ ಗೌಡ ದ್ವಜಾರೋಹಣ ಕಾರ್ಯಕ್ರಮ ನಿರ್ವಹಿಸಿದರು . ಕು|ದಕ್ಷಾ ಸಾಂತಪ್ಪ ಪ್ರಾರ್ಥಿಸಿದರು , ಇಂದ್ರಾವತಿಯವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರತಿಮೆಯ ಮುಂಭಾಗ ಸ್ಪಷ್ಟವಾಗಿ ಕಾಣುವ ಹೊಸ ನಾಮಫಲಕ ಆನಾವರಣಗೊಳಿಸಲಾಯಿತು.