ಸುಬ್ರಹ್ಮಣ್ಯ ರೋಟರಿ ಕ್ಲಬ್‌ನಿಂದ ಧ್ವಜಸ್ತಂಭ ಕೊಡುಗೆ

0


ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷರಾದ ಮಾಯಿಲಪ್ಪ ಸಂಕೇಶ್ ರವರು ಅಮರ ಮುಡ್ನೂರು ಗ್ರಾಮದ ಕುಂಟಿಕಾನ ಅಂಗನವಾಡಿಗೆ ಧ್ವಜ ಸ್ಥಂಭವನ್ನು ಕೊಡುಗೆಯಾಗಿ ನೀಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಜಿಲ್ಲೆ ೩೧ ೮೧ ವಲಯ೫ರ ಅಸಿಸ್ಟೆಂಟ್ ಗವರ್ನರ್ ವಿನಯ್ ಕುಮಾರ್ ನೆರವೇರಿಸಿದರು .
ವೇದಿಕೆಯಲ್ಲಿ ರೋಟರಿ ವಲಯ ೫ರ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಅಂಗನಾಡಿ ವಲಯ ಮೇಲ್ವಿಚಾರಕಿ ವಿಜಯ, ಅಂಗನವಾಡಿ ಕಾರ್ಯಕರ್ತೆ ಜಯಂತಿ ಎಸ್, ಅಮರ ಮೂಡ್ನೂರು ಪಂಚಾಯತ್ ಸದಸ್ಯ ತೇಜಾವತಿ ,ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷ ಚಂದ್ರಾವತಿ ಸುಬ್ರಮಣ್ಯ ರೋಟೋರಿ ಕ್ಲಬ್ಬಿನ ಪೂರ್ವ ಅಧ್ಯಕ್ಷರುಗಳಾದ ಸೀತಾರಾಮ ಎಣ್ಣೆಮಜಲ್, ಗೋಪಾಲ ಎಣ್ಣೆಮಜಲ್, ರವಿ ಕಕ್ಕೆಪದವ್ ಬೆಳ್ಳಾರೆ, ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷ ನವೀನ್ ತಂಬಿನಡ್ಕ, ಸ್ಥಳೀಯರಾದ ಮಹೇಶ್ ಮರ್ಕಂಜ, ಸಂತೋಷ್ ಮಡಪ್ಪಾಡಿ ಹಾಗೂ ಅಂಗನವಾಡಿ ಸಹಾಯಕಿ ,ಅಂಗನವಾಡಿಯ ಪೋಷಕರು, ಊರಿನವರು ಹಾಜರಿದ್ದರು.